ಬಿಸಿಸಿಐ ಸನ್ಮಾನ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಮಿಸ್ ಆಗಿದ್ದು ಯಾಕೆ?

ಗುರುವಾರ, 6 ಏಪ್ರಿಲ್ 2017 (08:44 IST)
ಹೈದರಾಬಾದ್: ನಿನ್ನೆ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ ಎಲ್ಲಾ ಕ್ರಿಕೆಟಿಗರ ನಡುವೆ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಮಿಸ್ ಆಗಿದ್ದರು. ಯಾಕೆ?

 

ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್,  ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿಗೆ ಬಿಸಿಸಿಐ ಚಿನ್ನದ ಬ್ಯಾಟ್ ನೀಡಿ ಗೌರವಿಸಿತು. ಇದೇ ಸಂದರ್ಭದಲ್ಲಿ ಈ ಕ್ರಿಕೆಟಿಗರ ಸಮಕಾಲೀನರಾದ ರಾಹುಲ್ ದ್ರಾವಿಡ್ ಕೂಡಾ ಇರಬೇಕಿತ್ತು. ಆದರೆ ಅವರು ಸಮಾರಂಭಕ್ಕೆ ಗೈರಾಗಿದ್ದರು.

 
ಕಾರಣ ವಿಮಾನ! ಹೌದು. ದೆಹಲಿ ತಂಡದ ಕೋಚ್ ಆಗಿರುವ ದ್ರಾವಿಡ್ ಅಲ್ಲಿಂದ ಹೈದರಾಬಾದ್ ಗೆ ತೆರಳುವ ವಿಮಾನ ಸರಿಯಾದ ಸಮಯಕ್ಕೆ ಸಿಗದೇ ಪ್ರಶಸ್ತಿ ತಪ್ಪಿಸಿಕೊಂಡರು. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ತಡವಾಗಿ ವಿಮಾನಗಳು ಹೊರಡುತ್ತಿವೆ. ಇದೇ ಕಾರಣಕ್ಕೆ ದ್ರಾವಿಡ್ ಗೆ ಸರಿಯಾದ ಸಮಯಕ್ಕೆ ತಲುಪಲಾಗಲಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ