ಐಪಿಎಲ್: ಮುಂಬೈ ವಿರುದ್ಧ ಧೋನಿ ಕಣಕ್ಕಿಳಿಯದೇ ಇದ್ದಿದ್ದರ ಕಾರಣ ಬಯಲು

ಶನಿವಾರ, 27 ಏಪ್ರಿಲ್ 2019 (06:51 IST)
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪ್ರಮುಖ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ, ರವೀಂದ್ರ ಜಡೇಜಾ ಮತ್ತು ಫಾ ಡು ಪ್ಲೆಸಿಸ್ ರನ್ನು ಕಣಕ್ಕಿಳಿಸಿರಲಿಲ್ಲ.


ಮಹತ್ವದ ಘಟ್ಟದಲ್ಲಿ ಸಿಎಸ್ ಕೆ ಈ ಬದಲಾವಣೆ ಮಾಡಿದ್ದಕ್ಕೆ ಕಾರಣವಿದೆ. ಧೋನಿ ಜ್ವರದಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ವಿಶ್ರಾಂತಿ ಪಡೆದರು. ಅವರ ಸ್ಥಾನದಲ್ಲಿ ಸುರೇಶ್ ರೈನಾ ಮತ್ತೊಮ್ಮೆ ತಂಡ ಮುನ್ನಡೆಸಿದರು.

ಅಷ್ಟೇ ಅಲ್ಲದೆ, ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಫಾ ಡು ಪ್ಲೆಸಿಸ್ ಗೂ ಸಿಎಸ್ ಕೆ ನಿನ್ನೆಯ ಪಂದ್ಯದಲ್ಲಿ ವಿಶ್ರಾಂತಿ ನೀಡಿತ್ತು. ಅವರ ಬದಲಿಗೆ ಧ್ರುವ್ ಶೋರೇ, ಮುರಳಿ ವಿಜಯ್ ಮತ್ತು ಸ್ಯಾಂಟ್ನರ್ ರನ್ನು ಕಣಕ್ಕಿಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ