ತಂಡಕ್ಕೆ ಸ್ಪೂರ್ತಿಯುತ ವಿದಾಯ ಹೇಳಿದ ಕೆಎಲ್ ರಾಹುಲ್

ಮಂಗಳವಾರ, 3 ನವೆಂಬರ್ 2020 (10:34 IST)
ದುಬೈ: ಐಪಿಎಲ್ 13 ರಲ್ಲಿ ತನ್ನ ತಂಡದ ಯಾತ್ರೆ ಮುಗಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರಿಗೆ ನಾಯಕ ಕೆಎಲ್ ರಾಹುಲ್ ಸ್ಪೂರ್ತಿಯುತ ಮಾತುಗಳನ್ನಾಡಿ ಬೀಳ್ಕೊಟ್ಟಿದ್ದಾರೆ.


ಸಿಎಸ್ ಕೆ ವಿರುದ್ಧದ ಪಂದ್ಯ ಪಂಜಾಬ್ ಗೆ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸೋತ ಕಾರಣ ಪಂಜಾಬ್ ಪ್ಲೇ ಆಫ್ ಗೆ ತೇರ್ಗಡೆಯಾಗಲಿಲ್ಲ. ಹೀಗಾಗಿ ಕೊನೆಯ ಪಂದ್ಯದ ಬಳಿಕ ರಾಹುಲ್ ತಮ್ಮ ತಂಡಕ್ಕೆ ‘ಇಷ್ಟು ದಿನ ಒಟ್ಟಾಗಿ ಹೋರಾಡಿದ್ದೇವೆ, ಒಟ್ಟಾಗಿ ಪ್ರಬಲರಾಗಿದ್ದೆವು. ಮುಂದೆಯೂ ಹೀಗೆಯೇ ಇರೋಣ’ ಎಂದು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ