ರೋಹಿತ್ ಶರ್ಮಾ ಹೇಳಿದ್ದನ್ನೆಲ್ಲಾ ಕಣ್ಮುಚ್ಚಿ ನಂಬಿದೆ, ಮಾಡಿದೆ ಎಂದ ಮುಂಬೈ ಕ್ರಿಕೆಟಿಗ

ಶನಿವಾರ, 10 ಅಕ್ಟೋಬರ್ 2020 (11:24 IST)
ದುಬೈ: ಐಪಿಎಲ್ 13 ರಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಯಶಸ್ಸಿಗೆ ನಾಯಕ ರೋಹಿತ್ ಶರ್ಮಾ ಕಾರಣ ಎಂದಿದ್ದಾರೆ.


ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮಾಡಿದ ಬಳಿಕ ಮಾತನಾಡಿರುವ ಸೂರ್ಯಕುಮಾರ್ ತಾವು ಮುಂಬೈ ತಂಡಕ್ಕೆ ಬಂದಾಗಿನಿಂದ ರೋಹಿತ್ ಶರ್ಮಾ ಹೇಳಿದ್ದನ್ನೆಲ್ಲಾ ಕಣ್ಮುಚ್ಚಿ ನಂಬಿದ್ದು, ಅದನ್ನೇ ಮಾಡುತ್ತಿರುವುದಾಗಿ ಹೇಳಿದ್ದಾರೆ. ನನಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದು ಅವರೇ. ಅವರು ಹೇಳಿದ್ದನ್ನೇ ಪಾಲಿಸಿದ್ದೇನೆ. ಮೈದಾನದ್ಲಲಿರಲಿ, ಜಿಮ್, ಪ್ರಾಕ್ಟೀಸ್ ಸೆಷನ್ ನಲ್ಲಿರಲಿ ರೋಹಿತ್ ನನಗೆ ಬೆಂಬಲವಾಗಿದ್ದಾರೆ. ಅವರ ಸಲಹೆಗಳನ್ನು ನಾನು ಚಾಚೂ ತಪ್ಪದೇ ಪಾಲಿಸುತ್ತಿರುವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ