ಬೇಕೆಂದೇ ಸೌರವ್ ಗಂಗೂಲಿಯನ್ನು ಕಡೆಗಣಿಸಿದ ರವಿಶಾಸ್ತ್ರಿ: ನೆಟ್ಟಿಗರು ಗರಂ

ಬುಧವಾರ, 11 ನವೆಂಬರ್ 2020 (09:57 IST)
ಮುಂಬೈ: ಐಪಿಎಲ್ 13 ರನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಉನ್ನತಾಧಿಕಾರಿಗಳಿಗೆ ಗೌರವ ಸಲ್ಲಿಸುವಾಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಬೇಕೆಂದೇ ಸೌರವ್ ಗಂಗೂಲಿ ಹೆಸರನ್ನು ಕೈ ಬಿಟ್ಟಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.


ರವಿಶಾಸ್ತ್ರಿ ಮತ್ತು ಗಂಗೂಲಿ ಈ ಮೊದಲು ಕೋಚ್ ಆಯ್ಕೆ ವಿಚಾರದಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಆದರೆ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಮೇಲೆ ಹಿಂದಿನ ಕಹಿಯನ್ನು ಬೆಳೆಸಲ್ಲ ಎಂದು ರವಿಶಾಸ್ತ್ರಿ ಹೇಳಿದ್ದರು. ಹಾಗಿದ್ದರೂ ನಿನ್ನೆ ಬಿಸಿಸಿಐ ಉನ್ನತಾಧಿಕಾರಿಗಳ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡುವಾಗ ಬೇಕೆಂದೇ ಗಂಗೂಲಿ ಹೆಸರು ಕೈ ಬಿಟ್ಟಿದ್ದಾರೆ. ಗಂಗೂಲಿ ಹೆಸರನ್ನು ಯಾಕೆ ಬಿಟ್ಟಿದ್ದೀರಿ? ಈ ಟೂರ್ನಿಯ ಯಶಸ್ಸಿನ ಪ್ರಮುಖ ಕ್ರೆಡಿಟ್ ಸಲ್ಲಬೇಕಾಗಿರುವುದು ಗಂಗೂಲಿಗೆ. ಅವರನ್ನು ಬೇಕೆಂದೇ ಕೈ ಬಿಟ್ಟಿದ್ದೀರೆಂದು ಗೊತ್ತು ಎಂದು ಹಲವರು ಟಾಂಗ್ ಕೊಟ್ಟಿದ್ದಾರೆ. ಮತ್ತೆ ಕೆಲವರು ಮೆಮೆ ಮೂಲಕ ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ