ಐಪಿಎಲ್ ನಲ್ಲಿ ದುಡಿದ ಹಣವನ್ನು ಕೊರೋನಾ ಪರಿಹಾರಕ್ಕೆ ನೀಡಿದ ಲಕ್ಷ್ಮೀ ರತನ್ ಶುಕ್ಲಾ

ಶನಿವಾರ, 8 ಮೇ 2021 (07:46 IST)
ಕೋಲ್ಕೊತ್ತಾ: ಐಪಿಎಲ್ ನಲ್ಲಿ ಕಾಮೆಂಟೇಟರ್ ಆಗಿ ದುಡಿದ ಅಷ್ಟೂ ಹಣವನ್ನು ಕೊರೋನಾ ಪೀಡಿತರ ನೆರವಿಗಾಗಿ ನೀಡಲು ಪಶ್ಚಿಮ ಬಂಗಾಲದ ಮಾಜಿ ಕ್ರಿಕೆಟಿಗ ಲಕ್ಷ್ಮೀ ರತನ್ ಶುಕ್ಲಾ ನಿರ್ಧರಿಸಿದ್ದಾರೆ.


ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀ ರತನ್ ಶುಕ್ಲಾ ತಾವು ದುಡಿದ ಅಷ್ಟೂ ಹಣವನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ನ ಮಾಜಿ ಶಾಸಕರೂ ಆಗಿರುವ ಲಕ್ಷ್ಮೀ ರತನ್ ಶುಕ್ಲಾ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಜನ್ಮದಿನದಂದೇ ಅವರು ಈ ಒಳ್ಳೆಯ ಕೆಲಸ ಮಾಡಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ