ಮಾಯಾಂಕ್ ಪ್ರತಿಭಾಶಾಲಿ ಆಟಗಾರ. ಕಳೆದ ಪಂದ್ಯದಲ್ಲಿ ಅವರು ಚೆನ್ನಾಗಿ ಆಡಿದ್ದಾರೆ. ಈ ಪಂದ್ಯದಲ್ಲಿ ಕೂಡ ಚೆನ್ನಾಗಿ ಆಡಿದರು. ಅವರು ಪರಿಪಕ್ವತೆ ಪಡೆಯುತ್ತಿದ್ದು, ಟೀಂ ಇಂಡಿಯಾಗೆ ಆಡುತ್ತಾರೆಂದು ಆಶಿಸುವುದಾಗಿ ಯುವರಾಜ್ ಐಪಿಎಲ್ ಅಧಿಕೃತ ವೆಬ್ಸೈಟ್ಗೆ ತಿಳಿಸಿದ್ದಾರೆ.
ಮಾಯಾಂಕ್ 48 ಎಸೆತಗಳಲ್ಲಿ 68 ರನ್ ಬಾರಿಸುವ ಮೂಲಕ ಕಿಂಗ್ಸ್ ಇಲೆವನ್ ವಿರುದ್ಧ ಡೆಲ್ಲಿ 5 ವಿಕೆಟ್ಗಳಿಂದ ಜಯಗಳಿಸಲು ನೆರವಾಗಿದ್ದರು. ಯುವರಾಜ್ ಕೂಡ 54 ರನ್ ಅಬ್ಬರದ ಆಟವಾಡಿದ್ದರು. ತಮ್ಮ ಬಿರುಸಿನ ಆಟದಿಂದಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದ ಮಾಯಾಂಕ್ ಆರಂಭದಲ್ಲಿ ವಿಕೆಟ್ಗಳನ್ನು ಉಳಿಸಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆರಂಭದಲ್ಲಿ ಕೆಲವು ಸಡಿಲ ಎಸೆತಗಳಿಗೆ ಹೊಡೆದಿದ್ದಾಗಿ ಹೇಳಿದರು. ನಂತರ ಶ್ರೇಯಾಸ್ ಅಯ್ಯರ್ ಮತ್ತು ಡುಮಿನಿ ಔಟಾಗಿದ್ದರಿಂದ ನಮಗೆ ಉತ್ತಮ ಜೊತೆಯಾಟದ ಮೂಲಕ ಸ್ಕೋರ್ ಮುಂದಕ್ಕೊಯ್ಯುವ ಅಗತ್ಯವಿತ್ತು ಎಂದು ಮಾಯಾಂಕ್ ಹೇಳಿದರು.