ರಾಜಸ್ಥಾನ ರಾಯಲ್ಸ್ ವಿರುದ್ಧ ಸಕಾಲಿಕ ಜಯ: ವಿರಾಟ್ ಕೊಹ್ಲಿ

ಶನಿವಾರ, 25 ಏಪ್ರಿಲ್ 2015 (12:40 IST)
ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ತಂಡದ 9 ವಿಕೆಟ್ ಜಯವನ್ನು ಸಕಾಲಿಕ ಜಯ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದು, ಉಳಿದ ಐಪಿಎಲ್ ಪಂದ್ಯಗಳಲ್ಲಿ ಕೂಡ ಇದೇ ಗೆಲುವಿನ ಗತಿ ಮುಂದುವರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

 ರಾಯಲ್ ಚಾಲೆಂಜರ್ಸ್ ಶುಕ್ರವಾರ ಟೇಬಲ್ ಟಾಪರ್ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಗಳಿಸುವ ಮೂಲಕ ಸತತ ಮೂರು ಸೋಲುಗಳಿಂದ ಹೊರಬಂದಿದೆ.  ತಮ್ಮ ತಂಡವು ಗೆಲ್ಲಲೇಬೇಕಾದ ಹತಾಶ ಸ್ಥಿತಿಯಲ್ಲಿತ್ತು ಎಂದು ಹೇಳಿದರು. 
 
ನಾವು ಇಂತಹ ಪ್ರದರ್ಶನ ಬಯಸಿದ್ದೆವು. ಇದೊಂದು ಬದಲಾವಣೆಯ ಗತಿಯಾಗಿರಬಹುದು. ಇದೊಂದು ಉತ್ತಮ, ಸಕಾಲಿಕ ಜಯ ಎಂದು ಅಜೇಯ 62 ರನ್ ಗಳಿಸಿದ ಕೊಹ್ಲಿ ನುಡಿದರು. 
 ರಾಜಸ್ಥಾನದ ನಾಯಕ ಶೇನ್ ವಾಟ್ಸನ್ ಸಾಕಷ್ಟು ರನ್ ಸ್ಕೋರ್ ಮಾಡದಿರುವ ಬಗ್ಗೆ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದರು.  ನಾವು ದುರದೃಷ್ಟವಶಾತ್ ಹೆಚ್ಚಿಗೆ ರನ್ ಸ್ಕೋರ್ ಮಾಡಲಿಲ್ಲ. ಆರ್‌ಸಿಬಿ ನಮ್ಮ ವಿರುದ್ಧ ಮೇಲುಗೈ ಸಾಧಿಸಿತು.150-160 ಮೊತ್ತ ಯೋಗ್ಯವಾದ ಮೊತ್ತವಾಗಿತ್ತು ಎಂದು ವಾಟ್ಸನ್ ಹೇಳಿದರು. 
 

ವೆಬ್ದುನಿಯಾವನ್ನು ಓದಿ