ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿರಾಟ್ ಕೊಹ್ಲಿಗೆ ಕೊಕ್?!

ಸೋಮವಾರ, 10 ಸೆಪ್ಟಂಬರ್ 2018 (09:02 IST)
ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಪದಚ್ಯುತಗೊಳಿಸಲಾಗಿದೆಯೇ?

ಈ ಬಗ್ಗೆ ಹಲವು ಮಾಧ್ಯಮ ವರದಿಗಳ ಹಿನ್ನಲೆಯಲ್ಲಿ ಇದೀಗ ಸ್ವತಃ ಆರ್ ಸಿಬಿ ಸ್ಪಷ್ಟನೆ ನೀಡಿದೆ. ಕೊಹ್ಲಿಗೆ ಕೊಕ್ ಕೊಟ್ಟು ದ.ಆಫ್ರಿಕಾ ಮೂಲದ ಎಬಿಡಿ ವಿಲಿಯರ್ಸ್ ಗೆ ತಂಡದ ನಾಯಕತ್ವ ನೀಡಲು ಆರ್ ಸಿಬಿ ಚಿಂತನೆ ನಡೆಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಆರ್ ಸಿಬಿ ‘ಇದೆಲ್ಲಾ ಸುಳ್ಳು ಸುದ್ದಿ. ಆರ್ ಸಿಬಿಗೆ ಈಗಲೂ ಕೊಹ್ಲಿಯೇ ನಾಯಕ. ಅವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ಕೆಲವು ಮಾಧ್ಯಮ ವರದಿಗಳಿಗೆ ಹುರುಳಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ಇದರೊಂದಿಗೆ ಆರ್ ಸಿಬಿ ಅಭಿಮಾನಿಗಳಿಗೆ ಸಮಾಧಾನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ