ಯುವರಾಜ್ ಸಿಂಗ್ ಕೆಕೆಆರ್ ವಿರುದ್ಧ ತಮ್ಮ ಹಿಂದಿನ ಆಟಕ್ಕೆ ಮರಳಿದರು. ಅವರದ್ದು ಪಂದ್ಯದ ದಿಕ್ಕನ್ನು ಬದಲಾಯಿಸಿದ ಇನ್ನಿಂಗ್ಸ್ ಎಂದು ಚೋಪ್ರಾ ಹೇಳಿದರು. ಯುವಿ ಇನ್ನಿಂಗ್ಸ್ನಲ್ಲಿ 8 ಬೌಂಡರಿಗಳು ಮತ್ತು ಒಂದು ಸಿಕ್ಸ್ ಸೇರಿದ್ದು ಅವರ ಪವರ್ ಹಿಟ್ಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದು, ಅಂತಾರಾಷ್ಟ್ರೀಯ ರಂಗದಲ್ಲಿ ಅವರನ್ನು ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಲಾಗಿದೆ.
ಭುವನೇಶ್ವರ್ ಮತ್ತು ಮುಸ್ತಫಿಜುರ್ ಅತ್ಯಂತ ಉತ್ತಮ ಡೆತ್ ಬೌಲಿಂಗ್ ಜೋಡಿ ಎಂದು ಚೋಪ್ರಾ ಉದ್ಗರಿಸಿದರು. ರಸೆಲ್ ಅನುಪಸ್ಥಿತಿ ಕೂಡ ನೈಟ್ ರೈಡರ್ಸ್ಗೆ ಭಾರಿ ಹಿನ್ನಡೆಯಾಗಿದ್ದು,ತಂಡದಲ್ಲಿ ಆರ್. ಸತೀಶ್ಗೆ ಸ್ಥಾನ ನೀಡುವ ಗಂಭೀರ್ ನಿರ್ಧಾರವನ್ನು ಟೀಕಿಸಿದರು. ಸತೀಶ್ ಅವರನ್ನು ಸೇರಿಸಿಕೊಂಡಿದ್ದು ತಿರುಗೇಟು ನೀಡಿತು. ಗಂಭೀರ್ ಶೆಲ್ಡನ್ ಜಾಕ್ಸನ್ ಅವರನ್ನು ಆಡಿಸಬಹುದಿತ್ತು ಎಂದು ಚೋಪ್ರಾ ಪ್ರತಿಕ್ರಿಯಿಸಿದರು.