ಇಂದು ಆರಂಭವಾಗಿರುವ ಮೇಲ್ಮನೆ ಕಲಾಪದ ಸಭಾನಾಯಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜ್ಯ ಗೃಹ ಖಾತೆ ಸಚಿವ ಹಾಗೂ ಸಭಾನಾಯಕ ಡಾ.ಜಿ.ಪರಮೇಶ್ವರ್, ಹಿರಿಯರ ಮನೆಯಾಗಿರುವ ವಿಧಾನ ಪರಿಷತ್ ಘನತೆಗೆ ದಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಹಾಸ್ಯ ಚಟಾಕಿ ಸಿಡಿಸಿರುವ ರಾಜ್ಯ ಗೃಹ ಖಾತೆ ಸಚಿವ ಹಾಗೂ ಸಭಾನಾಯಕ ಡಾ.ಜಿ.ಪರಮೇಶ್ವರ್, ನಾನು ಪರಮೇಶ್ವರ್, ವಿಪಕ್ಷ ನಾಯಕ ಈಶ್ವರ್ ಮೇಲೆ ಕುಳಿತಿರುವವರು ಶಂಕರ ಎಂದು ಹೇಳಿದರು. ಮಧ್ಯ ಪ್ರವೇಶಿಸಿದ ಸದಸ್ಯೆ ಮೋಟಮ್ಮ ಎಲ್ಲಾ ಶಂಕರಮಯ ಎಂದು ಹೇಳಿದರು.