ತೆರೆದ ದೊಡ್ಮನೆ, ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಕೆ ಶಿವಕುಮಾರ್ ಧನ್ಯವಾದ: ಕಿಚ್ಚ ಸುದೀಪ್ ಪೋಸ್ಟ್

Sampriya

ಗುರುವಾರ, 9 ಅಕ್ಟೋಬರ್ 2025 (16:38 IST)
Photo Credit X
ಬೆಂಗಳೂರು: ರಾತ್ರೋರಾತ್ರಿ  ಬಿಗ್‌ಬಾಸ್ ಮನೆಯನ್ನು ತೆರೆಯಲು ಸಹಾಯ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ನಲಪಾಡ್ ಅವರಿಗೆ ಕಿಚ್ಚ ಸುದೀಪ್ ಅವರು ಧನ್ಯವಾದ ಸಲ್ಲಿಸಿದ್ದಾರೆ. 

ಬಿಗ್‌ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್‌ ಸುಡ್ಟಿಯೋಗೆ ಬೀಗ ಹಾಕಿದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡವಿದೆ ಎಂಬ ಸುದ್ದಿ ಹರಿದಾಡಿತ್ತು. ಬಿಗ್‌ಬಾಸ್ ನೆಪದಲ್ಲಿ ಡಿಕೆಶಿ ನಟ್ಟು ಬೋಲ್ಟ್‌ ಸರಿಮಾಡಿದ್ರಾ ಎಂಬ ಚರ್ಚೆ ಶುರುವಾಗಿತ್ತು. 

ಆದರೆ ಇದೀಗ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಮನೆಯಲ್ಲೂ ಮತ್ತೇ ತೆರೆಯಲು ಸಹಾಯ ಮಾಡಿದ ಡಿಕೆಶಿಗೆ ವಿಶೇಷವಾದ ಧನ್ಯವಾದ ಸಲ್ಲಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ  ಬರೆದುಕೊಂಡಿದ್ದಾರೆ.

ಗೌರವಾನ್ವಿತರಿಗೆ ಡಿಕೆ ಶಿವಕುಮಾರ್‌ ಅವರಿಗೆ ಸಮಯೋಚಿತ ಬೆಂಬಲಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳು. 
#BBK ಭಾಗಿಯಾಗಿಲ್ಲ ಅಥವಾ ಇತ್ತೀಚಿನ ಅವ್ಯವಸ್ಥೆ ಅಥವಾ ಅಡಚಣೆಗಳ ಭಾಗವಾಗಿದೆ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ DCM ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ ಮತ್ತು ಅವರ ಸಮರ್ಪಿತ ಪ್ರಯತ್ನಗಳಿಗಾಗಿ #Nalpad ಅವರಿಗೆ ಧನ್ಯವಾದಗಳು. ಉಳಿಯಲು #BBK12 ಇಲ್ಲಿದೆ????

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ