ವಿವಾದಿತ ಸಂಭಾಷಣೆಗಳಿಗೆ ಕತ್ತರಿ ಹಾಕಲು ಆದಿಪುರುಷ್ ಚಿತ್ರತಂಡ ತೀರ್ಮಾನ

ಸೋಮವಾರ, 19 ಜೂನ್ 2023 (08:30 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾದಲ್ಲಿನ ಕೆಲವು ಆಕ್ಷೇಪಾರ್ಹ ಸಂಭಾಷಣೆಗಳು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಚಿತ್ರದಲ್ಲಿ ಬಳಸಲಾದ ವಿಎಫ್ ಎಕ್ಸ್, ಗ್ರಾಫಿಕ್ಸ್ ಬಗ್ಗೆ ಟ್ರೋಲ್ ಗಳು ಒಂದೆಡೆಯಾದರೆ ಕೆಲವು ವಿವಾದಿತ ಸಂಭಾಷಣೆಗಳು ಆಕ್ಷೇಪಕ್ಕೆ ಗುರಿಯಾಗಿದ್ದವು. ಈ ಬಗ್ಗೆ ಕೆಲವು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಇದರ ಬೆನ್ನಲ್ಲೇ ಚಿತ್ರತಂಡ ವಿವಾದಿತ ಸಂಭಾಷಣೆಗಳಿಗೆ ಕತ್ತರಿ ಹಾಕಲು ತೀರ್ಮಾನಿಸಿದೆ.

‘ನಾನು ಈ ಸಿನಿಮಾದಲ್ಲಿ ಪ್ರಭು ಶ್ರೀರಾಮ, ಸೀತಾಮಾತೆಯನ್ನು ಆರಾಧಿಸುವ ಎಷ್ಟೋ ಸಾಲುಗಳನ್ನು ಬರೆದಿದ್ದೇನೆ. ಅದು ಯಾರಿಗೂ ಕಾಣಿಸುವುದಿಲ್ಲ. ನಾಲ್ಕು ಸಾಲುಗಳು ಕೆಲವರ ಭಾವನೆಗೆ ಧಕ್ಕೆಯಾಗಿರಬಹುದು. ಹಾಗಂತ ನನ್ನ ಮೇಲೆ ಇಷ್ಟೊಂದು ವಿಷಕಾರುವುದೇ? ನಿಮಗೆ ಬೇಸರವಾಗಿದ್ದರೆ ನಿರ್ಮಾಪಕ-ನಿರ್ದೇಶಕರ ಜೊತೆ ಮಾತನಾಡಿ ಆ ಸಂಭಾಷಣೆಗಳನ್ನು ಬದಲಿಸುತ್ತೇವೆ. ವಾರದ ಬಳಿಕ ಸೇರ್ಪಡೆ ಮಾಡುತ್ತೇವೆ’ ಎಂದು ಸುದೀರ್ಘವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂಭಾಷಣೆಕಾರ ಮನೋಜ್ ಮುಂತಶೀರ್ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ