ರಾಜಮೌಳಿ ಒಬ್ಬರೇ ಮಾಸ್ಟರ್ ಪೀಸ್! ಆದಿಪುರುಷ್ ನೋಡಿ ನೆಟ್ಟಿಗರು ಹೀಗೆಂದಿದ್ಯಾಕೆ?!

ಶನಿವಾರ, 17 ಜೂನ್ 2023 (08:50 IST)
ಹೈದರಾಬಾದ್: ‍ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ನಿನ್ನೆ ಬಿಡುಗಡೆಯಾಗಿದೆ.

ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಯಿತ್ತು. ಆದರೆ ಕೆಲವರಿಗೆ ಈ ಸಿನಿಮಾ ಅಷ್ಟೊಂದು ಇಷ್ಟವಾಗಿಲ್ಲ. ಮೊದಲ ದಿನದ ಶೋ ನೋಡಿದ ಮೇಲೆ ಕೆಲವರು ಸ್ಟಾರ್ ನಿರ್ದೇಶಕ ರಾಜಮೌಳಿಯನ್ನು ನೆನೆಸಿಕೊಂಡಿದ್ದಾರೆ.

ಭಾರತಕ್ಕೆ ಒಬ್ಬರೇ ರಾಜಮೌಳಿ. ಅವರನ್ನು ಮೀರಿಸಲು ಯಾರಿಂದಲೂ ಆಗದು ಎಂದಿದ್ದಾರೆ. ಆದಿಪುರುಷ್ ಸಿನಿಮಾ ರಾಮಾಯಣ ಕಥಾವಸ್ತು ಹೊಂದಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿಲ್ಲ. ಇಂತಹ ಸಿನಿಮಾ ಮಾಡಲು ರಾಜಮೌಳಿ ಒಬ್ಬರೇ ಶಕ್ತರು. ಅವರನ್ನು ನಕಲು ಮಾಡಲು ಹೋಗಿ ಇತರರು ಫೇಲ್ ಆಗ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ