ರವಿತೇಜ ಖಿಲಾಡಿ ಚಿತ್ರದಲ್ಲಿ ನಟಿಸಲಿದ್ದಾರೆ ಆಕ್ಷನ್ ಸಿಂಗ್ ಅರ್ಜುನ್ ಸರ್ಜಾ

ಶನಿವಾರ, 30 ಜನವರಿ 2021 (10:59 IST)
ಹೈದರಾಬಾದ್ : ನಟ ರವಿ ತೇಜ ಅವರ ಕ್ರ್ಯಾಕ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಯಶಸ್ಸು ಗಳಿಸಿದೆ. ಆ ಮೂಲಕ ರವಿತೇಜ ಅವರ ವೃತ್ತಿಜೀವನ ಮತ್ತೊಮ್ಮೆ ಉನ್ನತ ಮಟ್ಟಕ್ಕೆ ಸಾಗಿದೆ ಎನ್ನಲಾಗಿದೆ.

ಇದೀಗ ಕ್ರ್ಯಾಕ್ ಚಿತ್ರದ ಬಳಿಕ ರವಿತೇಜ ಅವರು ‘ಖಿಲಾಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಮೇಶ್ ವರ್ಮಾ ನಿರ್ದೇಶಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ರವಿತೇಜ, ಅರ್ಜುನ್ ಸರ್ಜಾ ಕಾಂಬೊ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ