ಈ ನಿರ್ದೇಶಕರ ಜೊತೆ ಚಿತ್ರ ಮಾಡಲಿದ್ದಾರಂತೆ ನಟ ರಾಮ್ ಚರಣ್

ಶುಕ್ರವಾರ, 12 ಫೆಬ್ರವರಿ 2021 (12:26 IST)
ಹೈದಾರಾಬಾದ್ : ಭಾರತದ ಖ್ಯಾತ ನಿರ್ದೇಶಕರಲ್ಲಿ ಶಂಕರ್ ಕೂಡ ಒಬ್ಬರು. ಇವರ  ನಿರ್ದೇಶನದಲ್ಲಿ ಕೆಲಸ ಮಾಡಲು ಹಲವು ನಾಯಕರು ಕಾಯುತ್ತಿರುತ್ತಾರೆ. ಇದೀಗ ಶಂಕರ್ ಅವರು ರಾಮ್ ಚರಣ್ ಅವರ ಜೊತೆ ಕೆಲಸ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್  ಅಡಿಯಲ್ಲಿ ದಿಲ್ ರಾಜು ಈ ಪ್ಯಾನ್ ಇಂಡಿಯಾ ಯೋಜನೆಯನ್ನು ನಿರ್ಮಿಸಲಿದ್ದಾರೆ ಎಂದು ವರದಿಯಾಗಿದೆ.ಇದು ರಾಮ್ ಚರಣ್ ಅವರು ಆರ್ ಆರ್ ಆರ್ ಮತ್ತು ಆಚಾರ್ಯ ಚಿತ್ರದ ನಂತರದ ಯೋಜನೆಯಾಗಿದೆ. ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ ನೀಡಲಾಗುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ