ನಟ ಸುಶಾಂತ್ ಸಿಂಗ್ ಕೊಲೆ? ಆತ್ಮಹತ್ಯೆ? ಸತ್ಯ ಬಹಿರಂಗ

ಶನಿವಾರ, 3 ಅಕ್ಟೋಬರ್ 2020 (16:35 IST)
ಭಾರೀ ಕುತೂಹಲ ಕೆರಳಿಸಿದ್ದ ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆ ಒಂದು ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಇದು ಒಂದು ಪ್ರಮುಖ ಬೆಳವಣಿಗೆಯಾಗಿದೆ.

ಕೆಲವು ಮೂಲಗಳ ಪ್ರಕಾರ, ನಟನನ್ನು ಕೊಲೆ ಮಾಡಿಲ್ಲ ಮತ್ತು ಇದು ಆತ್ಮಹತ್ಯೆ ಪ್ರಕರಣ ಎಂದು ದೆಹಲಿಯ ಏಮ್ಸ್‌ನ ವೈದ್ಯರ ತಂಡ ಸಿಬಿಐಗೆ ಸಲ್ಲಿಸಿರುವ ತನ್ನ ಅಭಿಪ್ರಾಯದಲ್ಲಿ ತಿಳಿಸಿದೆ ಎನ್ನಲಾಗಿದೆ.

ಏಮ್ಸ್ ಪ್ಯಾನಲ್ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಫೈಲ್ ಅನ್ನು ಕ್ಲೋಸ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಸಿಬಿಐ ತಮ್ಮ ತನಿಖೆಯೊಂದಿಗೆ ವರದಿಯನ್ನು ದೃಢಿಕರಿಸುತ್ತಿದೆ. ಸಿಬಿಐ "ಆತ್ಮಹತ್ಯೆಗೆ ಪ್ರಚೋದನೆ" ವಿಷಯದಲ್ಲಿ ತನ್ನ ತನಿಖೆಯನ್ನು ಮುಂದುವರಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ