ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ವಿತರಣೆ: ಪ್ರಕಾಶ್ ರೈಗೆ ಕೊಟ್ಟ ಮಾತು ಉಳಿಸಿಕೊಂಡ ಯಶ್, ಸೂರ್ಯ

ಭಾನುವಾರ, 26 ಮಾರ್ಚ್ 2023 (09:40 IST)
Photo Courtesy: Twitter
ಬೆಂಗಳೂರು: ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ನಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರತೀ ಜಿಲ್ಲೆಗೆ ಒಂದು ಆಂಬ್ಯುಲೆನ್ಸ್ ವಿತರಣೆ ಮಾಡುವ ಬಗ್ಗೆ ನಟ ಪ್ರಕಾಶ್ ರೈ ಹೇಳಿಕೊಂಡಿದ್ದರು. ಇದಕ್ಕೆ ರಾಕಿಂಗ್ ಸ್ಟಾರ್ ಯಶ್, ಸೂರ್ಯ ಕೂಡಾ ಕೈ ಜೋಡಿಸುವುದಾಗಿ ಘೋಷಣೆ ಮಾಡಿದ್ದರು.

ಇದೀಗ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಪ್ರಕಾಶ್ ರೈ ಯೋಜನೆಗೆ ಕೈ ಜೋಡಿಸಿರುವ ಯಶ್, ಸೂರ್ಯ ಆಂಬ್ಯುಲೆನ್ಸ್ ವಿತರಣೆ ಮಾಡಲು ತಮ್ಮ ಸಹಾಯ ನೀಡಿದ್ದಾರೆ.

ಅದರಂತೇ ಈಗ ಜಿಲ್ಲೆಗೊಂದರಂತೆ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ವಿತರಣೆ ಮಾಡಲಾಗಿದೆ. ಇದಕ್ಕಾಗಿ ಪ್ರಕಾಶ‍್ ರೈ ತಮ್ಮ ಜೊತೆ ಕೈ ಜೋಡಿಸಿದ ಯಶ್, ತಮಿಳು ನಟ ಸೂರ್ಯ, ಚಿರಂಜೀವಿ, ಕೆವಿಎನ್‍ ಪ್ರೊಡಕ್ಷನ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ