ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಅನುಷ್ಕಾ

ಶುಕ್ರವಾರ, 19 ಮೇ 2017 (20:20 IST)
ಬಾಹುಬಲಿ ಚಿತ್ರದ ಯಶಸ್ವದ ಖುಷಿಯಲ್ಲಿರುವ ಮಾದಕ ನಟಿ ಅನುಷ್ಕಾ ಇಂದು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು ಪುನೀತರಾದರು.
 
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಸೇರಿದಂತೆ ಇತರ ಸಂಬಂಧಿಕರೊಂದಿಗೆ ಆಗಮಿಸಿದ ನಟಿ ಅನುಷ್ಕಾ ದೇವಿಗೆ ಪೂಜೆ ಮಾಡಿ ಆಶೀರ್ವಾದ ಪಡೆದರು.
 
ಕೆಲ ಗಂಟೆಗಳ ದೇವಾಲಯದಲ್ಲಿ ಉಪಸ್ಥಿತರಿದ್ದ ಅನುಷ್ಕಾ ನಂತರ ಮಂಗಳೂರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ