ಮುಂಬೈ ಬಗ್ಗೆ ಹೊಸ ಬಾಂಬ್ ಸಿಡಿಸಿದ ನಟಿ ಕಂಗನಾ ರಣಾವತ್

ಶನಿವಾರ, 5 ಸೆಪ್ಟಂಬರ್ 2020 (15:44 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟರ್ ನಲ್ಲಿ ತಮ್ಮ ಟ್ವಿಟ್ ಗಳಿಂದ ವಿವಾದ ಎಬ್ಬಿಸಿದ್ದಾರೆ.

ಮುಂಬೈ ಬಗ್ಗೆ ಹೇಳಿಕೆ ನೀಡಿದ್ದ ನಟಿ ಕಂಗನಾ ವಿರುದ್ಧ ಶಿವಸೇನೆ ಮುಖಂಡರು, ಮಹಾರಾಷ್ಟ್ರ ಸರಕಾರ ಗರಂ ಆಗಿದೆ.

ಇದಕ್ಕೆ ಟಾಂಗ್ ನೀಡಿರುವ ನಟಿ ಕಂಗನಾ ರಣಾವತ್, ಹಿಂದಿ ಚಿತ್ರರಂಗದಲ್ಲಿ “ಮರಾಠಾ ಪ್ರೈಡ್” ಶಿವಾಜಿ ಮಹಾರಾಜ್ ಮತ್ತು ರಾಣಿ ಲಕ್ಷ್ಮಿಬಾಯಿಯನ್ನು ದೊಡ್ಡ ಪರದೆಯತ್ತ ಕರೆತಂದ ಮೊದಲ ನಟಿ – ನಿರ್ದೇಶಕಿ ತಾವು ಎಂದು ಹೇಳಿಕೊಂಡಿದ್ದಾರೆ.

ಎಲ್ಲಾ ಟ್ರೋಲ್‌ಗಳನ್ನು ಕೆಣಕುತ್ತಾ ಟ್ವೀಟ್ ಮಾಡಿದ್ದು, “ಮಹಾರಾಷ್ಟ್ರದ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸುತ್ತಿರುವ ಎಲ್ಲ ಚಾಪ್ಲೂಗಳು ಮರಾಠಾ ಪ್ರೈಡ್ ಶಿವಾಜಿ ಮಹಾರಾಜ್ ಮತ್ತು ರಾಣಿ ಲಕ್ಷ್ಮಿಬಾಯಿಯನ್ನು ದೊಡ್ಡ ಪರದೆಯತ್ತ ಕರೆತಂದ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ನಾನು ಮೊದಲ ನಟಿ / ನಿರ್ದೇಶಕಿ ಎಂದು ತಿಳಿದಿರಬೇಕು ಮತ್ತು ನಾನು ಇದೇ ಜನರಿಂದ ಸಿನಿಮಾ ಬಿಡುಗಡೆಯ ಸಮಯದಲ್ಲಿ ವಿರೋಧ ಎದುರಿಸಿದ್ದೆ. " ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ