ನಟ ಸುಶಾಂತ ಸಿಂಗ್ ಸಾವಿಗೆ ಇವರೇ ಕಾರಣ ಎಂದ ನಟಿ ಕಂಗನಾ ರಣಾವತ್

ಬುಧವಾರ, 2 ಸೆಪ್ಟಂಬರ್ 2020 (18:23 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರನ್ನು ಕೊಂದಿದ್ದೇ ಇವರು ಎಂದು ನಟಿ ಕಂಗನ ರಣಾವತ್ ಹೊಸ ಬಾಂಬ್ ಸಿಡಿಸಿದ್ದಾಳೆ.

ಕರಣ್ ಜೋಹರ್, ಆದಿತ್ಯ ಚೋಪ್ರಾ, ಮಹೇಶ್ ಭಟ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಂದರು ಎಂದು ಸ್ಪೋಟಕ ಆರೋಪ ಕೇಳಿಬಂದಿದೆ.

ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಹಿರಿಯ ಪತ್ರಕರ್ತರಲ್ಲದೆ, ಚಲನಚಿತ್ರ ನಿರ್ಮಾಪಕರಾದ ಕರಣ್ ಜೋಹರ್, ಆದಿತ್ಯ ಚೋಪ್ರಾ ಮತ್ತು ಮಹೇಶ್ ಭಟ್ ಅವರನ್ನು ಹೆಸರಿಸಿದ್ದಾರೆ.  

ಕರಣ್ ಜೋಹರ್, ಆದಿತ್ಯ ಚೋಪ್ರಾ, ಮಹೇಶ್ ಭಟ್, ರಾಜೀವ್ ಮಸಂದ್ ಮತ್ತು ರಕ್ತದ ಬಾಯಾರಿದ ರಣಹದ್ದುಗಳ ಸಂಪೂರ್ಣ ಸೈನ್ಯವು, ಮಾಫಿಯಾ ಮಾಧ್ಯಮವು ಸುಶಾಂತ್‌ನನ್ನು ಕೊಂದಿತು. ರಜಪೂತ್ ಕುಟುಂಬದ ಏಕೈಕ ಪುತ್ರ ಬಾಲಿವುಡ್‌ನಲ್ಲಿ ಬೆದರಿಕೆಗೆ, ಶೋಷಣೆ ಮತ್ತು ಕಿರುಕುಳಕ್ಕೆ ಬಲಿಯಾದನು ಎಂದು ಟ್ವಿಟ್ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ