ಆ ಭಯೋತ್ಪಾದಕರಿಂದ ಬಾಲಿವುಡ್ ಉಳಿಸಿ ಎಂದ ನಟಿ ಕಂಗನಾ ರಣಾವತ್

ಶನಿವಾರ, 19 ಸೆಪ್ಟಂಬರ್ 2020 (19:59 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಬಾಲಿವುಡ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ವಿವಿಧ ರೀತಿಯ ಭಯೋತ್ಪಾದಕರ ಬಗ್ಗೆ ಮಾತನಾಡಿದ್ದಾರೆ.


ನಾವು ಚಿತ್ರೋದ್ಯಮವನ್ನು ವಿವಿಧ ಭಯೋತ್ಪಾದಕರಿಂದ ಉಳಿಸಬೇಕಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರಗಳು ಪ್ಯಾನ್-ಇಂಡಿಯಾ ಬಿಡುಗಡೆಯನ್ನು ಪಡೆಯುವುದಿಲ್ಲ. ಆದರೆ ಹಾಲಿವುಡ್ ಚಲನಚಿತ್ರಗಳು ಪ್ರಮುಖವಾಗಿ ಬಿಡುಗಡೆಗೊಳ್ಳುತ್ತಿರುವುದು ಆತಂಕಕಾರಿ ಪ್ರವೃತ್ತಿ ಎಂದಿದ್ದಾರೆ. 

ಸ್ವಜನಪಕ್ಷಪಾತ ಬ್ರಿಗೇಡ್ ಮತ್ತು ಡ್ರಗ್ ಮಾಫಿಯಾದಂತಹ ಭಯೋತ್ಪಾದಕರಿಂದ ಸಿನಿಮಾ ರಂಗವನ್ನು, ಫಿಲ್ಮ್ ಉದ್ಯಮವನ್ನು ಉಳಿಸಬೇಕಿದೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ