ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಅಜಯ್ ದೇವಗನ್ ಸಿನಿಮಾಗೆ ಸಂಕಷ್ಟ

ಶುಕ್ರವಾರ, 16 ಸೆಪ್ಟಂಬರ್ 2022 (14:03 IST)
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬರುವ ಸಿನಿಮಾ ಥ್ಯಾಂಕ್ ಗಾಡ್ ನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನಲೆಯಲ್ಲಿ ಅಜಯ್ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಸಿನಿಮಾದಲ್ಲಿ ಅಜಯ್ ಹಿಂದೂ ದೇವರು ಚಿತ್ರಗುಪ್ತನ ಪಾತ್ರ ಮಾಡಿದ್ದಾರೆ. ಆದರೆ ಚಿತ್ರಗುಪ್ತ ಆಧುನಿಕ ಡ್ರೆಸ್ ತೊಟ್ಟುಕೊಂಡು ಸ್ಟೈಲಿಶ್ ಆಗಿ ತೋರಿಸಲಾಗಿದೆ.

ಇದರಿಂದ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಉತ್ತರ ಪ್ರದೇಶದಲ್ಲಿ ಈಗಾಗಲೇ ಚಿತ್ರತಂಡದ ಮೇಲೆ ದೂರು ದಾಖಲಾಗಿದೆ. ಕರ್ನಾಕಟದಲ್ಲೂ ಪ್ರತಿರೋಧ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ