ಅಜೇಯ್ ರಾವ್ ನಿರೀಕ್ಷಣಾ ಜಾಮೀನು ಅರ್ಜಿ ಇಂದು ವಿಚಾರಣೆ

ಗುರುವಾರ, 26 ಆಗಸ್ಟ್ 2021 (09:46 IST)
ಬೆಂಗಳೂರು: ಲವ್ ಯೂ ರಚ್ಚು ಚಿತ್ರೀಕರಣ ವೇಳೆ ಫೈಟರ್ ವಿವೇಕ್ ದುರಂತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಜೇಯ್ ರಾವ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.


ಈಗಾಗಲೇ ಚಿತ್ರದ ನಿರ್ದೇಶಕ ಶಂಕರ್, ಸ್ಟಂಟ್ ಮಾಸ್ಟರ್ ವಿನೋದ್, ಕ್ರೇನ್ ಅಪರೇಟರ್ ಮಹದೇವ್ ನ್ಯಾಯಾಂಗ ಬಂಧನಲ್ಲಿದ್ದಾರೆ. ನಿನ್ನೆ ನಾಯಕಿ ರಚಿತಾ ರಾಂ ಬಿಡದಿ ಠಾಣೆಗೆ ತೆರಳಿ ತಮ್ಮ ಹೇಳಿಕೆ ನೀಡಿದ್ದರು.

ಚಿತ್ರೀಕರಣ ವೇಳೆ ಸ್ಥಳದಲ್ಲಿದ್ದ ನಟ ಅಜೇಯ್ ರಾವ್ ಗೆ ಬಂಧನ ಭೀತಿಯಿದ್ದು, ಈ ಸಂಬಂದ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ರಾಮನಗರದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ