ಯೆಂಟಮ್ಮಾ ಸಾಂಗ್ ಅಲ್ಲು ಅರ್ಜುನ್ ಮಾಡಿದ್ರೆ ಚೆನ್ನಾಗಿರ್ತಿತ್ತು!

ಬುಧವಾರ, 5 ಏಪ್ರಿಲ್ 2023 (08:50 IST)
ಹೈದರಾಬಾದ್: ಸಲ್ಮಾನ್ ಖಾನ್, ವೆಂಕಟೇಶ್, ರಾಮ್ ಚರಣ್ ತೇಜ ಹೆಜ್ಜೆ ಹಾಕಿರುವ ಕಿಸಿ ಕಾ ಭಾಯ್ ಕಿಸೀ ಕಾ ಜಾನ್ ಸಿನಿಮಾದ ಯೆಂಟಮ್ಮಾ ಹಾಡು ಈಗ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ.

ಸಲ್ಮಾನ್ ಖಾನ್ ನಾಯಕರಾಗಿರುವ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಇವರಿಬ್ಬರ ಜೊತೆ ಯೆಂಟಮ್ಮಾ ಎಂಬ ತೆಲುಗು, ಹಿಂದಿ ಮಿಶ್ರಿತ ಹಾಡಿನಲ್ಲಿ ತೆಲುಗ ಸ್ಟಾರ್ ನಟರಾದ ವೆಂಕಟೇಶ್ ಮತ್ತು ರಾಮ್ ಚರಣ್ ತೇಜ ಕೂಡಾ ಹೆಜ್ಜೆ ಹಾಕಿದ್ದಾರೆ.

ಆದರೆ ಹಾಡು ನೋಡಿದ ಅಲ್ಲು ಅರ್ಜುನ್ ಫ್ಯಾನ್ಸ್ ಈ ಹಾಡಿಗೆ ರಾಮ್ ಚರಣ್ ಗಿಂತ ಅಲ್ಲು ಅರ್ಜುನ್ ನೃತ್ಯ ಮಾಡಬೇಕಿತ್ತು ಎಂದು ಕಾಲೆಳೆದಿದ್ದಾರೆ. ಇದಕ್ಕೆ ರಾಮ್ ಚರಣ್ ಫ್ಯಾನ್ಸ್ ಕೂಡಾ ತಿರುಗೇಟು ನೀಡಿದ್ದು, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗಿಂತ ರಾಮ್ ಚರಣ್ ನಾಯಕರಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ಯೆಂಟಮ್ಮಾ ಹಾಡು ಈಗ ಅಲ್ಲು ಮತ್ತು ರಾಮ್ ಚರಣ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ