ಜಾತಕದಲ್ಲಿರುವ ಕಂಟಕ ಅಂಬಿ ಸಾವಿಗೆ ಕಾರಣವಾಯ್ತಾ? ಈ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಸೋಮವಾರ, 26 ನವೆಂಬರ್ 2018 (10:13 IST)
ಬೆಂಗಳೂರು : ಅಂಬಿ ನಿಧನರಾದ ಹಿನ್ನಲೆಯಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಟ ಜಗ್ಗೇಶ್ ಅವರು ಅಂಬಿಗೆ ಜಾತಕದಲ್ಲಿ ಕಂಟಕವಿತ್ತು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.


‘ಖ್ಯಾತ ಜ್ಯೋತಿಷಿ ಪ್ರಕಾಶ್ ಮಣ್ಯ ಅಂಬರೀಶ್ ಜಾತಕದಲ್ಲಿ ಸದ್ಯ ಸ್ವಲ್ಪ ತೊಂದರೆ ಇದೆ, ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಹೋಮ ಮಾಡಿಸಬೇಕು ಎಂದಿದ್ದರು. ಇದೇ ತಿಂಗಳ 12ರಂದು ಹೋಮ ಕಾರ್ಯ ನಿಗದಿಯಾಗಿತ್ತು. ಆದ್ರೆ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಹೋಮವನ್ನ ಮುಂದೂಡಲಾಗಿತ್ತು’ ಎಂದು ಹೇಳಿದ್ದಾರೆ.


‘ಆದರೆ ನನ್ನ ಮನಸ್ಸಿಗೆ ಯಾಕೋ ನೆಮ್ಮದಿಯಿಲ್ಲ ಹೋಮ ಮಾಡಿಸ್ಬೇಕಿತ್ತು ಎಂದು ಪ್ರಕಾಶ್ ಮಣ್ಯ ನನ್ನ ಬಳಿ ಹೇಳಿಕೊಂಡಿದ್ದರು. ಅಷ್ಟರಲ್ಲೇ ಅಂಬರೀಶ್ ನಮ್ಮನ್ನ ಅಗಲಿದ್ದಾರೆ ಎಂದು ಹೇಳುತ್ತಾ ನಟ ಜಗ್ಗೇಶ್ ಕಣ್ಣೀರಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ