ಕೊನೆಗೂ ಬೆಂಗಳೂರು ತಲುಪಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸೋಮವಾರ, 26 ನವೆಂಬರ್ 2018 (10:11 IST)
ಬೆಂಗಳೂರು: ಯಜನಮಾನ ಸಿನಿಮಾದ ಚಿತ್ರೀಕರಣಕ್ಕಾಗಿ ಸ್ವೀಡನ್ ಗೆ ತೆರಳಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಶ್ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಮರಳಿದ್ದಾರೆ.


ಅಂಬರೀಶ್ ನಿಧನ ಸುದ್ದಿ ತಿಳಿದ ತಕ್ಷಣ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದ ದರ್ಶನ್ ಅಪ್ಪಾಜಿಯನ್ನು ನೋಡಲು ಸ್ವೀಡನ್ ನಿಂದ ನಮ್ಮ ತಂಡದೊಂದಿಗೆ ನೇರವಾಗಿ ಬೆಂಗಳೂರಿಗೆ ಬರುತ್ತಿದ್ದೇವೆ ಎಂದು ದರ್ಶನ್ ಟ್ವೀಟ್ ಮಾಡಿದ್ದರು.

 ಇದೀಗ ಬೆಂಗಳೂರಿಗೆ ಬಂದು ತಲುಪಿರುವ ದರ್ಶನ್ ಅಂಬರೀಶ್ ಅಂತಿಮ ದರ್ಶನ ಪಡೆಯಲಿದ್ದು, ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಅಂಬರೀಶ್ ರನ್ನು ತಮ್ಮ ತಂದೆ ಸಮಾನ ಎನ್ನುತ್ತಿದ್ದ ದರ್ಶನ್ ಗೆ ಕೊನೆಗೂ ಅಂತಿಮ ದರ್ಶನದ ಭಾಗ್ಯ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ