ತಮಿಳು ನಟರ ವಿರುದ್ಧ ಹರಿಹಾಯ್ದ ಕನ್ನಡದ ಹಿರಿಯ ನಟ ಅನಂತನಾಗ್

ಬುಧವಾರ, 11 ಏಪ್ರಿಲ್ 2018 (07:05 IST)
ಬೆಂಗಳೂರು : ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಮಿಳು ಸಿನಿಮಾ ತಾರೆಯರು ಪ್ರತಿಭಟನೆ ಮಾಡುತ್ತಿರುವ ಹಿನ್ನಲೆಯಲ್ಲಿ ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು ಖಡಕ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಅನಂತನಾಗ್ ಅವರು ವಿಡಿಯೋ ಒಂದನ್ನು ಹರಿಬಿಟ್ಟು  ಆ ಮೂಲಕ ತಮಿಳು ನಟರ ವಿರುದ್ಧ ಹರಿಹಾಯ್ದಿದ್ದಾರೆ.’ತಮಿಳುನಾಡಿನ ನಟರು  ರಾಜಕಾರಣಿಗಳ ಥರ ಆಡುತ್ತಾರೆ.  ಇಂಥ ಹೊತ್ತಲ್ಲಿ ಕನ್ನಡಿಗರು ಏಕೆ ಸುಮ್ಮನಿರಬೇಕು? ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗ್ಬೇಕು. ಸಮಸ್ತ ಕನ್ನಡಿಗರ ಜೊತೆ ನಾವಿದ್ದೇವೆ’ ಎಂದು ಹಿರಿಯ ನಟ ಅನಂತನಾಗ್ ಅವರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ