ಅನುಶ್ರೀ ಪರ ವಕಾಲತ್ತು ವಹಿಸಿ ಸಿಕ್ಕಿ ಹಾಕಿಕೊಂಡ ಮಾಜಿ ಸಿಎಂ

ಸೋಮವಾರ, 5 ಅಕ್ಟೋಬರ್ 2020 (10:05 IST)
ಬೆಂಗಳೂರು: ಆಂಕರ್ ಅನುಶ್ರೀ ಸಿಸಿಬಿ ವಿಚಾರಣೆಗೆ ಮೊದಲು ಮಾಜಿ ಸಿಎಂ ಒಬ್ಬರಿಗೆ ಕರೆ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎಂಬ ವಿಚಾರ ಈಗ ರಾಜಕೀಯ ವಿಚಾರದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ.


ಸಿಸಿಬಿ ವಿಚಾರಣೆಗೆ ಕರೆದ ಬೆನ್ನಲ್ಲೇ ಅನುಶ್ರೀ ಮಾಜಿ ಸಿಎಂ ಒಬ್ಬರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಇದರ ಬೆನ್ನಲ್ಲೇ ಆ ರಾಜಕೀಯ ನಾಯಕ ಸಿಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದರು ಎಂಬ ವಿಚಾರ ಈಗ ಕೇಳಿಬರುತ್ತಿದೆ. ಆ ಮಾಜಿ ಸಿಎಂ ಯಾರು, ಕರೆಯಲ್ಲಿ ಏನು ಹೇಳಲಾಗಿತ್ತು ಎಂಬ ವಿಚಾರ ಈಗ ತನಿಖೆಯಾಗುತ್ತಿದೆ. ಇದೇ ವಿಚಾರವಾಗಿ ಸಚಿವ ಸಿಟಿ ರವಿ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಕ್ಸಮರವೂ ನಡೆದಿದೆ. ಒಂದು ವೇಳೆ ಆ ಮಾಜಿ ಸಿಎಂ ಹೆಸರು ಬಯಲಾದರೆ ಈ ವಿಚಾರ ರಾಜಕೀಯ ರಂಗದಲ್ಲಿ ಹೊಸ ಕೆಸರೆರಚಾಟಕ್ಕೆ ಕಾರಣವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ