ನಟ ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ದಿನ

Krishnaveni K

ಸೋಮವಾರ, 22 ಜುಲೈ 2024 (09:18 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ದರ್ಶನ್ ಪ್ರಕರಣದಲ್ಲಿ ಇಂದು ಕೋರ್ಟ್ ಮತ್ತೊಂದು ಮಹತ್ವದ ತೀರ್ಮಾನ ಪ್ರಕಟಿಸಲಿದೆ.

ಕಳೆದ ಒಂದು ತಿಂಗಳಿನಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಆಗಸ್ಟ್ 1 ರವರಗೆ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ. ಆದರೆ ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿದ್ದ ದರ್ಶನ್ ಗೆ ಜೈಲೂಟ ಸರಿ ಬರುತ್ತಿರಲಿಲ್ಲ.

ತಮಗೆ ಅಜೀರ್ಣವಾಗುತ್ತಿದೆ, ಜೈಲೂಟ ಒಗ್ಗುತ್ತಿಲ್ಲ, ಮನೆ ಊಟ ಕೊಡಲು ಅವಕಾಶ ಕೊಡಿ ಎಂದು ವಕೀಲರ ಮೂಲಕ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ವಿಚಾರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಇಂದು ಕೋರ್ಟ್ ದರ್ಶನ್ ಗೆ ಮನೆ ಆಹಾರ ನೀಡಬಹುದೇ ಎಂಬ ವಿಚಾರವಾಗಿ ಮಹತ್ವದ ತೀರ್ಪು ಪ್ರಕಟಿಸಲಿದೆ. ಇದಕ್ಕೆ ಮೊದಲು ಹೈಕೋರ್ಟ್ ಒಂದು ವಾರದೊಳಗಾಗಿ ಈ ವಿಚಾರವಾಗಿ ತೀರ್ಪು ಪ್ರಕಟಿಸಲು ಸೂಚಿಸಿತ್ತು. ಅದರಂತೆ ಇಂದು ಮನೆ ಊಟವೇ, ಜೈಲೂಟವೇ ಮುಂದುವರಿಯುತ್ತಾ ಎನ್ನುವುದು ಸ್ಪಷ್ಟವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ