ಸ್ಯಾಂಡಲ್ ವುಡ್ ಗೆ ಇನ್ನಾದ್ರೂ ಒಳ್ಳೆದಾಗಲಿ ಎಂದು ಪೂಜೆ ಮಾಡಿದ ದೊಡ್ಡಣ್ಣ ದಂಪತಿ

Krishnaveni K

ಬುಧವಾರ, 14 ಆಗಸ್ಟ್ 2024 (11:02 IST)
ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿದ್ದ ಸ್ಯಾಂಡಲ್ ವುಡ್ ಗೆ ಮತ್ತೆ ಗೆಲುವು ಸಿಗಲಿ ಎಂದು ಕಲಾವಿದರ ಸಂಘದಲ್ಲಿ ಇಂದು ನಟ ದೊಡ್ಡಣ್ಣ ನೇತೃತ್ವದಲ್ಲಿ ಪೂಜೆ ನೆರವೇರಿದೆ.
 

ಚಿತ್ರರಂಗದ ಹಿರಿಯನಾಗಿ ದೊಡ್ಡಣ್ಣ ದಂಪತಿ ಕಲಾವಿದರ ಸಂಘದಲ್ಲಿ ನಡೆದ ಪೂಜೆ ನೆರವೇರಿಸಿದ್ದಾರೆ. ಉಡುಪಿ ಪ್ರಕಾಶ್ ಅಮ್ಮಣ್ಣಾಯ ಪೂಜಾ ಕಂಕರ್ಯಗಳ ನೇತೃತ್ವ ವಹಿಸಿದ್ದರು. ದೊಡ್ಡಣ್ಣ ದಂಪತಿ ಜೊತೆಗೆ ಕೆಲವು ಪದ್ಮಜಾ ರಾವ್ ಸೇರಿದಂತೆ ಕಲಾವಿದರೂ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಮೊನ್ನೆಯಷ್ಟೇ ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಪತ್ರಿಕಾಗೋಷ್ಠಿ ನಡೆಸಿ ಪೂಜೆ ನಡೆಸುತ್ತಿರುವ ವಿಚಾರದ ಬಗ್ಗೆ ಮಾತನಾಡಿದ್ದರು. ಆದರೆ ಇದರ ಬೆನ್ನಲ್ಲೇ ಅಪಸ್ವರ ಕೇಳಿಬಂದಿತ್ತು. ಈ ಪೂಜೆ ದರ್ಶನ್ ಗಾಗಿಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಚಿತ್ರರಂಗಕ್ಕೆ ಒಳಿತಾಗಬೇಕಾದರೆ ಪೂಜೆ ಮಾಡಿದರೆ ಏನು ಪ್ರಯೋಜನ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇದೆಲ್ಲದರ ನಡುವೆ ಇಂದು ಪೂಜೆ, ಹವನ ನಡೆಸಲಾಗಿದೆ. ಗಣಪತಿ ಹೋಮ, ನವಗ್ರಹ ಪೂಜೆ ಸೇರಿದಂತೆ ಸಿನಿಮಾ ರಂಗದ ಒಳಿತಿಗಾಗಿ ಯಜಮಾನನ ಸ್ಥಾನದಲ್ಲಿ ದೊಡ್ಡಣ್ಣ ದಂಪತಿ ಕುಳಿತು ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯ ಬಳಿಕವಾದರೂ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆಗಳಾಗಲಿ ಎಂದು ಎಲ್ಲರ ಹಾರೈಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ