ಬಾಹುಬಲಿ ಚಿತ್ರಕ್ಕಾಗಿ ಕನ್ನಡ ಸಿನಿಮಾ ಎತ್ತಂಗಡಿ: ನಟ ಮಿತ್ರ ಆಸ್ಪತ್ರೆಗೆ ದಾಖಲು

ಗುರುವಾರ, 27 ಏಪ್ರಿಲ್ 2017 (08:12 IST)
ಬೆಂಗಳೂರು: ಬಾಹುಬಲಿ 2 ಚಿತ್ರ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಈ ಬಹುನಿರೀಕ್ಷಿತ ಚಿತ್ರದ ಪ್ರದರ್ಶನಕ್ಕಾಗಿ ಕನ್ನಡದ ರಾಗ ಚಿತ್ರವನ್ನು ಹಲವು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

 
ಮಿತ್ರ ನಟಿಸಿ, ನಿರ್ಮಿಸಿದ ರಾಗ ಚಿತ್ರದಲ್ಲಿ ಮಲಯಾಳಂನ ಭಾಮ ನಾಯಕಿಯಾಗಿ ನಟಿಸಿದ್ದರು. ಇದು ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಆದರೆ ಬಾಹುಬಲಿ ಪ್ರದರ್ಶನಕ್ಕಾಗಿ ಸುಮಾರು 25 ಚಿತ್ರಮಂದಿರಗಳಿಂದ ರಾಗ ಚಿತ್ರವನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ ಎಂದು ಆರೋಪ ಬಂದಿದೆ.

ಸ್ವತಃ ಚಿತ್ರದ ನಿರ್ದೇಶಕ ಪಿ.ಸಿ. ಶೇಖರ್ ಇದನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುವ ಮೂಲಕ ವಿವರಿಸಿದ್ದಾರೆ. ಸುದ್ದಿ ತಿಳಿದು ಅಸ್ವಸ್ಥರಾದ ನಿರ್ಮಾಪಕ ಮಿತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ