ಬಾಲಿವುಡ್ ಗೆ ಎಂಟ್ರಿ ಕೊಡಲಿರುವ ಯುವ ನಾಯಕ ಬೆಲ್ಲಕೊಂಡ ಸಾಯಿ ಶ್ರೀನಿವಾಸ್

ಮಂಗಳವಾರ, 16 ಫೆಬ್ರವರಿ 2021 (10:53 IST)
ಹೈದರಾಬಾದ್ : ಟಾಲಿವುಡ್ ನ ಯುವ ನಾಯಕ ಬೆಲ್ಲಕೊಂಡ ಸಾಯಿ ಶ್ರೀನಿವಾಸ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇವರು ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಛತ್ರಪತಿ’ ಚಿತ್ರ ಹಿಂದಿ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ.

ಡಾ.ಜಯಂತಿಲಾಲ್ ಅವರು ಪೆನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಾಯಕ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಬೆಲ್ಲಕೊಂಡ ಸಾಯಿ ಶ್ರೀನಿವಾಸ್ ಅವರ ಎಲ್ಲಾ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಲಾಗಿದ್ದು, ಅಲ್ಲಿ ಉತ್ತಮ ವೀಕ್ಷಣೆಯನ್ನು ಗಳಿಸಿದೆ. ಇದೀಗ ಅವರು ಬಾಲಿವುಡ್ ನಲ್ಲಿ ನಟಿಸುತ್ತಿರುವುದರಿಂದ ಮುಂದೆ ಅವರು ತೆಲುಗು ಚಿತ್ರ ಮಾಡುತ್ತಾರಾ? ಅಥವಾ ಬಾಲಿವುಡ್ ನಲ್ಲಿಯೇ ಉಳಿಯುತ್ತಾರಾ? ಎಂಬ ಚರ್ಚೆ ಟಾಲಿವುಡ್ ವಲಯದಲ್ಲಿ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ