ಖ್ಯಾತ ನಿರ್ದೇಶಕನ ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಟ ಸೂರ್ಯ

ಸೋಮವಾರ, 15 ಫೆಬ್ರವರಿ 2021 (09:29 IST)
ಹೈದರಾಬಾದ್ : ಪಾಂಡ್ಯರಾಜ್ ನಿರ್ದೇಶನದ ‘ಸೂರ್ಯ 40’ ಚಿತ್ರದಲ್ಲಿ ನಟ  ಸೂರ್ಯ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಯಾವಾಗ ಪ್ರಾರಂಭವಾಗಲಿದೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ನಡುವೆ ನಟ ಸೂರ್ಯ ಸ್ಟಾರ್ ನಿರ್ದೇಶಕರೊಬ್ಬರ ಚಿತ್ರ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ‘ಅಂಜನ್’ ಚಿತ್ರದ  ತೆಲುಗು ಸಂಗೀತ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ರಾಜಮೌಳಿ, ಸೂರ್ಯ, ನಾಗಾರ್ಜುನ್ ಮತ್ತು ಇತರರು ಭಾಗವಹಿಸಿದ್ದಾರೆ. ಆ ವೇಳೆ ನಟ ಸೂರ್ಯ ರಾಜಮೌಳಿ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದು, ಇದು ಅವರು ತಮ್ಮ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಎಂದು ಪರಿಗಣಿಸಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ‘ಆಯಾನ್’ ಚಿತ್ರದ ಕಾರಣದಿಂದ ಸೂರ್ಯ, ರಾಜಮೌಳಿ ಚಿತ್ರ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ