Chaithra Kundapura wedding: ತಾಳಿ ಕಟ್ಟಿಸುವಾಗ ಮಂತ್ರ ಹೇಳಿದ ಚೈತ್ರಾ ಕುಂದಾಪುರ video
ಚೈತ್ರಾ ಕುಂದಾಪುರ ಹಿಂದೂ ಕಾರ್ಯಕರ್ತೆಯಾಗಿ ಹೆಸರು ಪಡೆದವರು. ಬಳಿಕ ಬಿಜೆಪಿ ಟಿಕೆಟ್ ಕೊಡಿಸೋದಾಗಿ 5 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಜೈಲಿಗೂ ಹೋಗಿ ಬಂದವರು. ನೇರಾನೇರ ಮಾತುಗಳಿಂದಲೇ ಜನರ ಗಮನಸೆಳೆದವರು.
ಇಂದು ಚೈತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನಿಮೇಷನ್ ಓದಿರುವ ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಶ್ರೀಕಾಂತ್ ಕಶ್ಯಪ್ ಎಂಬವರೊಂದಿಗೆ ಚೈತ್ರಾ ಮದುವೆಯಾಗಿದ್ದಾರೆ. ಈ ಮೂಲಕ ಬಹಳ ದಿನಗಳ ತಮ್ಮಿಬ್ಬರ ಮದುವೆಗೆ ದಾಂಪತ್ಯದ ಮುದ್ರೆಯೊತ್ತಿದ್ದಾರೆ.
ತಾಳಿ ಕಟ್ಟಿಸುವಾಗ ಚೈತ್ರಾ ಭಾವುಕರಾಗಿದ್ದು, ತಾವೇ ಮಂತ್ರ ಪಠಿಸಿದ್ದಾರೆ. ಈ ಮದುವೆಗೆ ಬಿಗ್ ಬಾಸ್ ಖ್ಯಾತಿ ರಜತ್ ಸೇರಿದಂತೆ ಅವರ ಆಪ್ತರು ಬಂದು ಹಾರೈಸಿದ್ದಾರೆ.