ವೈ ಸೆಕ್ಯುರಿಟಿ ಕೇಳಿದ ಬಾಲಿವುಡ್ ನಟಿ : ಜೀವ ಅಪಾಯದಲ್ಲಿದೆಯಾ?

ಮಂಗಳವಾರ, 29 ಸೆಪ್ಟಂಬರ್ 2020 (18:17 IST)
ಬಾಲಿವುಡ್ ನಟಿ  ಪಾಯಲ್ ಘೋಷ್ ಈಗಾಗಲೇ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಆ ಥರದ ಕಿರುಕುಳ, ದೌರ್ಜನ್ಯದ ಕೇಸ್ ದಾಖಲು ಮಾಡಿದ್ದಾರೆ.

ಈ ನಡುವೆ ನಟಿ ಪಾಯಲ್ ಘೋಷ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡಿದ್ದು, ವೈ ವರ್ಗದ ಭದ್ರತೆಗೆ ಒತ್ತಾಯಿಸಿದ್ದಾರೆ.

ಪಾಯಲ್ ಘೋಷ್ ಅವರು ರಾಜ್ಯಸಭಾ ಸಂಸದ ರಾಮದಾಸ್ ಅಥಾವಾಲೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ತಮ್ಮನ್ನು ಆ ಥರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ.

ಇದಕ್ಕಾಗಿ ತಮ್ಮ ಜೀವಕ್ಕೆ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದು, ನಟಿ ತಮ್ಮ ಜೀವಕ್ಕೆ ಭದ್ರತೆಯನ್ನು ಕೋರಿದ್ದಾರೆ.

ಇನ್ನು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿ ಮಾಡಿದ ನಟಿ ತಮಗಾಗಿ ವೈ-ವರ್ಗದ ಭದ್ರತೆಯನ್ನು ಕೋರಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ