ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಕೇಸ್

ಶನಿವಾರ, 15 ಫೆಬ್ರವರಿ 2020 (17:33 IST)
ಸ್ಯಾಂಡಲ್ ವುಡ್ ನಟ, ಪೈಲ್ವಾನ್ ಕಿಚ್ಚ ಸುದೀಪ್ ವಿರುದ್ಧ ದಾಖಲಾಗಿದ್ದ ವಂಚನೆ ಕೇಸ್ ಹೊಸ ತಿರುವು ಪಡೆದುಕೊಂಡಿದೆ.

ವಾರಸ್ದಾರ ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಎಸ್ಟೇಟ್ ವೊಂದರಲ್ಲಿ ಹಾನಿ ಹಾಗೂ ನಷ್ಟ ಉಂಟುಮಾಡಲಾಗಿದೆ ಅಂತ ಎಸ್ಟೇಟ್ ಮಾಲೀಕರಾಗಿರೋ ನವೀನ್ ಮಯೂರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಕೇಸ್ ನ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿದೆ. ಆ ಮೂಲಕ ನಟ ಸುದೀಪ್ ವಿರುದ್ಧ ಕೇಳಿಬಂದಿದ್ದ ವಂಚನೆ ಕೇಸ್ ವಜಾಗೊಂಡಿದೆ ಅಂತ ಕಿಚ್ಚನ ಪರ ನ್ಯಾಯವಾದಿ ಗೋಪಿ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ