ಇಂದೋರ್: ಗ್ಯಾಂಗ್ಸ್ಟರ್ ಸಲ್ಮಾನ್ ಲಾಲಾ ಕುರಿತ ವಿವಾದಾತ್ಮಕ ವಿಡಿಯೊವೊಂದನ್ನು ಬಿಗ್ ಬಾಸ್ ಖ್ಯಾತಿಯ ನಟ ಅಜಾಜ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂದೋರ್ ಕ್ರೈಮ್ ಬ್ರಾಂಚ್ ಅಜಾಜ್ ಖಾನ್ಗೆ ಸೂಚನೆ ಜಾರಿಗೊಳಿಸಿದ್ದು, ಆತನ ಇನ್ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಲು ಪತ್ರ ಬರೆದಿದೆ. ಅಲ್ಲದೆ, ಇಂದೋರ್ನ ಇರ್ಶಾದ್ ಹಕೀಮ್ ದೂರು ದಾಖಲಿಸಿದ್ದು, ಅಜಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಜಾಜ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಸಲ್ಮಾನ್ ಲಾಲಾ ಮರಣದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದರು. ಲಾಲಾ ಕೆರೆಯಲ್ಲಿ ಮುಳುಗಿ ಸತ್ತಿದ್ದಾನೆ ಎನ್ನುತ್ತಾರೆ. ಆದರೆ ಆತ ಉತ್ತಮ ಈಜುಗಾರ. ಸಮುದ್ರದಲ್ಲಿ ಈಜುವ ಗ್ಯಾಂಗ್ಸ್ಟರ್ ಕೆರೆಯಲ್ಲಿ ಮುಳುಗುವುದಿಲ್ಲ. ಆತನ ಧರ್ಮದ ಕಾರಣಕ್ಕೆ ಕೊಲೆಯಾದನು ಎಂದು ಆರೋಪಿಸಿದ್ದರು.
ಈ ಹೇಳಿಕೆಯು ಸಾಮುದಾಯಿಕ ದ್ವೇಷವನ್ನು ಉತ್ತೇಜಿಸುತ್ತದೆ ಎಂದು ಇಂದೋರ್ನ ಇರ್ಶಾದ್ ಹಕೀಮ್ ದೂರು ದಾಖಲಿಸಿದ್ದರು. ವಿಡಿಯೊ ವಿವಾದ ಆಗುತ್ತಿದ್ದರೆ ಅಜಾಜ್ ಖಾನ್ ಕ್ಷಮಾಪಣೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಲಾಲಾ ಇನ್ಫ್ಲೂಯೆನ್ಸರ್ ಎಂದು ತಿಳಿದು ವಿಡಿಯೋ ಹಂಚಿದೆ. ಆತನ ಕ್ರಿಮಿನಲ್ ಹಿನ್ನೆಲೆ ತಿಳಿಯಲಿಲ್ಲ. ಸತ್ಯ ಗೊತ್ತಾದ ತಕ್ಷಣ ಪೋಸ್ಟ್ ತೆಗೆದುಹಾಕಿದೆ. ಈ ತಪ್ಪಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಆದರೆ, ಇಂದೋರ್ ಕ್ರೈಮ್ ಬ್ರಾಂಚ್ ತನಿಖೆಯನ್ನು ತೀವ್ರಗೊಳಿಸಿದ್ದು, ಅಜಾಜ್ ಖಾನ್ರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.