ಜೈಲಿನಲ್ಲಿ ಸದ್ಯ ದರ್ಶನ್‌ಗಿಲ್ಲ ಮನೆಯೂಟ ಸವಿಯುವ ಭಾಗ್ಯ

Sampriya

ಸೋಮವಾರ, 22 ಜುಲೈ 2024 (18:31 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಮನೆಯೂಟ ನೀಡುವ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 25ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

ಈ ಮೂಲಕ ಸದ್ಯ ದರ್ಶನ್ ಅವರು ಜೈಲೂಟವನ್ನೇ ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇಂದು ದರ್ಶನ್ ಪರ ಹಾಗೂ ಪೊಲೀಸರ ಪರ ವಾದವನ್ನು ಆಲಿಸಿದ ನ್ಯಾಯಾಲಯ ಈ ಸಂಬಂಧ ಆದೇಶವನ್ನು ಜುಲೈ 25ಕ್ಕೆ ಪ್ರಕಟಿಸುವುದಾಗಿ ಹೇಳಿದೆ.


ದರ್ಶನ್ ಪರ ವಕೀಲರ ವಾದ ಹೀಗಿತ್ತು: ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಮನೆಯೂಟ ಪಡೆಯಬಹುದು. ಕೆಲ ನಿಬಂಧನೆಗಳೊಂದಿಗೆ ಮನೆಯೂಟಕ್ಕೆ ಅವಕಾಶ ಮಾಡಿಕೊಡಬಹುದು. ಸೆಕ್ಷನ್ 30ರ ಪ್ರಕಾರ ಜೈಲಿನಲ್ಲಿ ಇರುವ ಆರೋಪಿ ಮನೆಯ ಊಟ ಪಡೆಯಬಹುದು. ಅದರ ಜತೆಗೆ ಹಾಸಿಗೆ ಹಾಗೂ ಪುಸ್ತಕಗಳನ್ನು ನೀಡಬಹುದು. ಇವೆಲ್ಲ ಅವಕಾಶವನ್ನು ಮಾಡಿಕೊಡಬೇಕೆಂದು ವಾದ ಮಂಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ