ಪತ್ನಿ, ಪುತ್ರನ ಭೇಟಿ ಬಳಿಕ ಮತ್ತಷ್ಟು ಮಂಕಾದ ನಟ ದರ್ಶನ್
ಕಳೆದ ಮೂರು ರಾತ್ರಿಗಳನ್ನು ಜೈಲಿನಲ್ಲಿ ಕಳೆದಿರುವ ದರ್ಶನ್ ಗೆ ಪ್ರಕರಣದಲ್ಲಿ ಸಾಕ್ಷ್ಯಗಳು ಬಲವಾಗಿರುವುದು ಹೈರಾಣಾಗಿಸಿದೆ. ಇದರಿಂದಾಗಿ ನಿದ್ರೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ. ಅದರಲ್ಲೂ ಜೈಲೂಟ ಸೇರದೇ ಯಾರೊಂದಿಗೂ ಏನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ.
ಈ ನಡುವೆ ನಿನ್ನೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೈಲಿಗೆ ಹೋಗಿದ್ದರು. ಈ ವೇಳೆ ಮಗನನ್ನು ನೋಡಿ ಅವರ ದುಃಖದ ಕಟ್ಟೆ ಒಡೆದಿತ್ತು ಎನ್ನಲಾಗಿದೆ. ಇಬ್ಬರೂ 15 ನಿಮಿಷಗಳ ಕಾಲ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ದರ್ಶನ್ ಮತ್ತಷ್ಟು ಮಂಕಾಗಿದ್ದಾರೆ ಎಂದು ತಿಳಿದುಬಂದಿದೆ.