ಬಂಧನ ಬೆನ್ನಲ್ಲೇ ನಟ ದರ್ಶನ್ ರನ್ನು ಸಿನಿಮಾದಿಂದಲೇ ಹೊರಹಾಕಿದ ಚಿತ್ರತಂಡ

Krishnaveni K

ಶನಿವಾರ, 6 ಜುಲೈ 2024 (16:49 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಚಿತ್ರತಂಡವೊಂದು ಅವರನ್ನು ಸಿನಿಮಾದಿಂದಲೇ ಕೈ ಬಿಟ್ಟಿದೆ.

ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಸಿನಿಮಾ ಕರಾವಳಿ. ಕಿಚ್ಚ ಸುದೀಪ್ ಆಪ್ತ ಗುರುದತ್ ಗಾಣಿಗ ಈ ಸಿನಿಮಾದ ನಿರ್ದೇಶಕ. ಈ ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಪ್ರಜ್ವಲ್ ಗೆ ದರ್ಶನ್ ಆಪ್ತರಾಗಿದ್ದರು. ಹೀಗಾಗಿ ಈ ಸಿನಿಮಾದಲ್ಲಿ ಅದೇ ಆಪ್ತತೆಯಿಂದ ದರ್ಶನ್ ಪಾತ್ರ ಮಾಡುವುದು ಫಿಕ್ಸ್ ಆಗಿತ್ತು.

ಆದರೆ ಇದೀಗ ಚಿತ್ರೀಕರಣ ಹಂತದಲ್ಲಿರುವ ಕರಾವಳಿ ಚಿತ್ರತಂಡ ದರ್ಶನ್ ರನ್ನು ಸಿನಿಮಾದಿಂದಲೇ ಹೊರಹಾಕಿದೆ. ಇನ್ನೇನು ಶೂಟಿಂಗ್ ಆರಂಭವಾಗಬೇಕೆನ್ನುವಾಗ ದರ್ಶನ್ ಜೈಲು ಪಾಲಾಗಿದ್ದು, ಯಾವಾಗ ಬಿಡುಗಡೆಯಾಗಬಹುದು ಎಂಬುದಕ್ಕೆ ಖಾತ್ರಿಯಿಲ್ಲ. ಹೀಗಾಗಿ ಅವರನ್ನೇ ಚಿತ್ರತಂಡದಿಂದ ಕೈ ಬಿಡಲಾಗಿದೆ.

ಇದೊಂದು ಪವರ್ ಫುಲ್ ಪಾತ್ರವಾಗಿದ್ದು, ಆ ಪಾತ್ರಕ್ಕೆ ಅಂತಹ ನಟರೇ ಬೇಕು. ಇದೀಗ ದರ್ಶನ್ ಮಾಡಬೇಕಾಗಿದ್ದ ಪಾತ್ರವನ್ನು ಚಿತ್ರತಂಡ ಯಾರ ಕೈಯಲ್ಲಿ ಮಾಡಿಸಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ