ಸುಮಲತಾ ಪ್ರಚಾರಕ್ಕೆ ದರ್ಶನ್ ಇದ್ದರೆ ಸಾಕು ಎಂಬ ಕಿಚ್ಚ ಸುದೀಪ್ ಪ್ರತಿಕ್ರಿಯೆಗೆ ಚಾಲೆಂಜಿಂಗ್ ಸ್ಟಾರ್ ಉತ್ತರವೇನು ಗೊತ್ತಾ?!

ಮಂಗಳವಾರ, 19 ಮಾರ್ಚ್ 2019 (08:57 IST)
ಬೆಂಗಳೂರು: ಮಂಡ್ಯ ಲೋಕಸಭೆ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುವ ಕುರಿತಂತೆ ಇತ್ತೀಚೆಗೆ ಕಿಚ್ಚ ಸುದೀಪ್ ನೀಡಿದ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು.


ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತೀರಾ ಎಂದು ಪತ್ರಕರ್ತರು ಕೇಳಿದಾಗ ‘ದರ್ಶನ್ ಒಬ್ಬರು ಇದ್ದರೆ ಸಾಕು. ನನಗೂ ರಾಜಕೀಯಕ್ಕೂ ಆಗಿ ಬರಲ್ಲ’ ಎಂದು ಸುದೀಪ್ ಹೇಳಿದ್ದರು. ಹೇಳಿ ಕೇಳಿ ಈ ಇಬ್ಬರೂ ನಟರ ಸಂಬಂಧ ಅಷ್ಟಕಷ್ಟೇ. ಅದರ ಬೆನ್ನಲ್ಲೇ ಸುದೀಪ್ ಈ ರೀತಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸ್ವತಃ ಸುಮಲತಾ ಕಿಚ್ಚ ಸುದೀಪ್ ಅಥವಾ ಇನ್ಯಾರನ್ನೂ ಪ್ರಚಾರಕ್ಕೆ ಬರುವಂತೆ ಒತ್ತಾಯ ಮಾಡಲ್ಲ ಎಂದಿದ್ದರು.

ಇದೀಗ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಸುಮಲತಾ ಅಂಬರೀಶ್ ಜತೆಗಿದ್ದ ದರ್ಶನ್ ಗೆ ಪತ್ರಕರ್ತರು ಸುದೀಪ್ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ನಗು ನಗುತ್ತಲೇ ಪ್ರತಿಕ್ರಿಯಿಸಿದ ದರ್ಶನ್ ‘ನಾನು ಒಬ್ಬನೇ ಹೇಗಾಗುತ್ತೇನೆ? ನನ್ನ ಜತೆಗೆ ಸ್ಟಾರ್ ಗಳೇ ಇದ್ದಾರಲ್ಲ’ ಎಂದು ಪಕ್ಕದಲ್ಲೇ ಕೂತಿದ್ದ ಯಶ್ ಕಡೆಗೆ ಕೈ ತೋರಿಸಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ