ಸಂಕಷ್ಟದಲ್ಲಿ ಸೂಪರ್ ಸ್ಟಾರ್ ಸಂಬಂಧಿಯ 'ಸೂಪರ್ ಸ್ಟಾರ್'

ಸೋಮವಾರ, 14 ನವೆಂಬರ್ 2022 (15:22 IST)
ಉದಯೋನ್ಮುಖ ನಟನ ಚಿತ್ರ ಸಂಕಷ್ಟದಲ್ಲಿ ಸಿಲುಕಿ ರಂಪಾಟವೇ ಆಗಿದೆ.ಸಿನಿಮಾ ನಿರ್ದೇಶಕನ ಮೇಲೆಯೇ ವಂಚನೆ ಪ್ರಕರಣ ದಾಖಲಾಗಿದೆ.ಬಹುನೀರಿಕ್ಷೆ ಮೂಡಿಸಿದ್ದ ಚಿತ್ರತಂಡದಲ್ಲಿ ಬಿರುಕು ಮೂಡಿದೆ.ಅದ್ಧೂರಿಯಾಗಿ ಮುಹೂರ್ತ ನಡೆಸಿದ್ದ ನಿರ್ಮಾಪಕ ನಿರ್ದೇಶಕನ ಮೇಲೆ ದೂರು ದಾಖಲಾಗಿದೆ.
 
1 ಕೋಟಿ 10 ಲಕ್ಷ ವಂಚನೆ ಆರೋಪದ ಮೇಲೆ ದೂರು ದಾಖಲಾಗಿದೆ.ನಿರ್ದೇಶಕ ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ಪ್ರಚೋದನೆ ನೀಡಿ,ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ಹಣ ಬಳಸಿಕೊಂಡಿದ್ದಾರೆ ,ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಮಾರಾಟ ಮಾಡಿಲ್ಲ.ನಿರ್ದೇಶಕನ ಕೃತ್ಯಕ್ಕೆ ನಿರ್ಮಾಪಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
 
ಈಗ 'ಸೂಪರ್ ಸ್ಟಾರ್' ಚಿತ್ರ ಸಂಕಷ್ಟದಲ್ಲಿ ಸಿಲುಕಿದೆ.ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಾಯಕನಾಗಿ ನಟಿಸಿದ ಚಿತ್ರ ಇದ್ದಿದ್ದರೆ,ನಟ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ನಟಿಸಿರುವ ಚಿತ್ರ ,ಆರ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರ ಸ್ಟಾರ್ .ಸೂಪರ್ ಹಿಟ್ ಆಗುತ್ತೆ ಹಣ ಬರುತ್ತೆ ಎಂದು ನಿರ್ಮಾಪಕ ಮೈಲಾರಿಗೆ ಪ್ರಚೋದನೆ ನೀಡಿದ ನಿರ್ದೇಶಕರಂತೆ, ನಿರ್ದೇಶಕ ವೆಂಕಟೇಶ್ ಬಾಬು ,ಹೊಸ ನಿರ್ಮಾಪಕರಾದ ಸತ್ಯನಾರಾಯಣ , ರಮಾದೇವಿ ವಿರುದ್ಧ ದೂರು ದಾಖಲಾಗಿದೆ.ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ಮಾಡ್ತಿದ್ರು.
 
ಕೋವಿಡ್ ಹಿನ್ನೆಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು.ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಿದ ಆರೋಪ ಕೇಳಿಬಂದಿತ್ತು.ಈಗ ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗೂ ಸತ್ಯನಾರಾಯಣ ಅವರ ನಿರ್ದೇಶಕ ವೆಂಕಟೇಶ್ ಬಾಬು ಹಾಕಿಕೊಂಡಿದ್ದಾರೆ.ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ ,ಧಮ್ಕಿ ಹಾಕಿದ್ದಾರೆ.ಹೀಗಾಗಿ ನಿರ್ಮಾಪಕ ಮೈಲಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಹೆಣ್ಣೂರು ದೂರು ನೀಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ