ನವರಾತ್ರಿಗೆ ಸಿಹಿ ಸುದ್ದಿ ಕೊಡುತ್ತೇನೆಂದ ಧ್ರುವ ಸರ್ಜಾ

ಮಂಗಳವಾರ, 20 ಅಕ್ಟೋಬರ್ 2020 (10:31 IST)
ಬೆಂಗಳೂರು: ಅಣ್ಣನ ಅಗಲುವಿಕೆಯ ನೋವಿನಿಂದ ಹೊರಬಂದು ನಿಧಾನವಾಗಿ ಚಿತ್ರರಂಗದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನವರಾತ್ರಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ.


ನನ್ನ ಎಲ್ಲಾ ವಿಐಪಿಗಳಿಗೆ (ಅಭಿಮಾನಿಗಳಿಗೆ) ನವರಾತ್ರಿಗೆ ಸಿಹಿ ಸುದ್ದಿ ನೀಡುತ್ತೇನೆ. ನಂದಕಿಶೋರ್ ನಿರ್ದೇಶನದಲ್ಲಿ ಉದಯ್ ಮೆಹ್ತಾ ನಿರ್ಮಾಣದಲ್ಲಿ ನನ್ನ ಮುಂದಿನ ಚಿತ್ರ ನಿರ್ಮಾಣವಾಗಲಿದೆ. ಇದರ ಮುಹೂರ್ತ ಅಕ್ಟೋಬರ್ 26 ರಂದು ನೆರವೇರಲಿದೆ. ನವಂಬರ್ 6 ರಂದು ಚಿತ್ರದ ಟೈಟಲ್ ಘೋಷಣೆಯಾಗಲಿದೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಧ್ರುವ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ