ರಾಮಮಂದಿರ ಪ್ರಾಣ ಪ್ರತಿಷ್ಠೆ ದಿನವೇ ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ

Krishnaveni K

ಸೋಮವಾರ, 22 ಜನವರಿ 2024 (09:32 IST)
ಬೆಂಗಳೂರು: ಅಯೋಧ್ಯೆಯಲ್ಲಿ ಇಂದು ರಾಮಜನ್ಮಭೂಮಿಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಈ ಶುಭ ಗಳಿಗೆಯೇ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡಲಿದ್ದಾರೆ.

ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಸುಸಂದರ್ಭದಲ್ಲಿ ಎಷ್ಟೋ ಜನ ಅನೇಕ ಒಳ್ಳೆಯ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಅನೇಕರಿಗೆ ಇದುವೇ ಶುಭ ಮುಹೂರ್ತವಾಗುತ್ತಿದೆ.

ಇದೇ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೂ ನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಇಂದಿನ ಶುಭ ಮುಹೂರ್ತದಲ್ಲಿ ಧ್ರುವ ತಮ್ಮ ಹಿರಿಯ ಪುತ್ರಿ ಮತ್ತು ಪುತ್ರನಿಗೆ ನಾಮಕರಣ ಮಾಡಲಿದ್ದಾರೆ.

2022 ರಲ್ಲಿ ಧ್ರುವ ದಂಪತಿಗೆ ಮೊದಲ ಮಗಳ ಜನನವಾಗಿತ್ತು. 2023 ರಲ್ಲಿ ಗಂಡು ಮಗುವಿನ ಜನನವಾಗಿತ್ತು. ಆದರೆ ಈ ಇಬ್ಬರೂ ಮಕ್ಕಳಿಗೂ ಇದುವರೆಗೆ ನಾಮಕರಣ ಮಾಡಿರಲಿಲ್ಲ. ಇದೀಗ ನಾಮಕರಣ ಶಾಸ್ತ್ರ ನೆರವೇರಿಸಲಾಗುತ್ತಿದೆ. ಅದೂ ಈ ದಿನ ರಾಮನ ದಿನವಾಗಿರುವುದರಿಂದ ಮಕ್ಕಳಿಗೆ ರಾಮಾಯಣ, ಮಹಾಭಾರತದ ಹಿನ್ನಲೆಯಿರುವ ಹೆಸರನ್ನೇ ಇಡಲಾಗುತ್ತಿದೆ. ಜೊತೆಗೆ ಧ್ರುವ ಮೆಚ್ಚಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ