ಡ್ರಗ್ಸ್ ಪ್ರಕರಣ: ತಮಿಳು ನಟ ನಟ ಶ್ರೀಕಾಂತ್‌ಗೆ ಜು.7ರ ವರೆಗೆ ನ್ಯಾಯಾಂಗ ಬಂಧನ

Sampriya

ಮಂಗಳವಾರ, 24 ಜೂನ್ 2025 (17:57 IST)
ನವದೆಹಲಿ: ಡ್ರಗ್ಸ್‌ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ತಮಿಳು ನಟ ಶ್ರೀಕಾಂತ್‌ಗೆ ಸಂಕಷ್ಟ ಎದುರಾಗಿದೆ. ಬಂಧನದ ಬಳಿಕ ಎಂಟು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಪೊಲೀಸರು ನಟನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಜುಲೈ 7ರ ವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದು, ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಶ್ರೀಕಾಂತ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. 

ಮಾಹಿತಿ ನೀಡಿದ ಪೊಲೀಸರು, ಶ್ರೀಕಾಂತ್ ಅವರ ರಕ್ತದ ಮಾದರಿಗಳನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಹೇಳಿದರು. 

ಸೋಮವಾರ ರಾತ್ರಿ ಶ್ರೀಕಾಂತ್‌ನನ್ನು ಎಗ್ಮೋರ್‌ನಲ್ಲಿರುವ 14ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ವಶಕ್ಕೆ ಪಡೆಯಲಾಯಿತು. ಇದೀಗ ಅವರನ್ನು ಜುಲೈ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶ್ರೀಕಾಂತ್‌ಗೆ ಡ್ರಗ್ಸ್ ಸರಬರಾಜು ಮಾಡಿರುವುದಾಗಿ ಪ್ರಸಾದ್ ತಪ್ಪೊಪ್ಪಿಕೊಂಡಿದ್ದಾನೆ

ಎಐಎಡಿಎಂಕೆ ಮಾಜಿ ಸದಸ್ಯನನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿದಾಗ ಈ ತನಿಖೆ ಪ್ರಾರಂಭವಾಯಿತು. ವಿಚಾರಣೆ ವೇಳೆ ಶ್ರೀಕಾಂತ್‌ಗೆ ಡ್ರಗ್ಸ್ ಸರಬರಾಜು ಮಾಡಿದ್ದನ್ನು ಪ್ರಸಾದ್ ಒಪ್ಪಿಕೊಂಡಿದ್ದಾನೆ. 

ಎಐಎಡಿಎಂಕೆಯಿಂದ ಉಚ್ಛಾಟಿತರಾಗಿರುವ ಪ್ರಸಾದ್ ಅವರಿಂದ ಡ್ರಗ್ಸ್ ಖರೀದಿಸಿ ಸೇವಿಸಿದ ಆರೋಪ ಶ್ರೀಕಾಂತ್ ಮೇಲಿದೆ. ಇದಾದ ಬಳಿಕ ಚೆನ್ನೈ ಪೊಲೀಸರು ಶ್ರೀಕಾಂತ್‌ನನ್ನು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ