ನಿರ್ದೇಶಕ ಸಾಯಿ ಬಾಲಾಜಿ ಕೊರೊನಾ ಸೋಂಕಿನಿಂದ ನಿಧನ

ಬುಧವಾರ, 28 ಏಪ್ರಿಲ್ 2021 (11:33 IST)
ಹೈದರಾಬಾದ್ : ಹಿರಿಯ ಚಿತ್ರಕಥೆಗಾರ, ನಿರ್ದೇಶಕ ಸಾಯಿ ಬಾಲಾಜಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇವರು ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ಇವರು ದಿವಂಗತ ಉದಯ್ ಕಿರಣ್ ಅವರ ಕೊನೆಯ ಚಿತ್ರ ‘ಜೈ ಶ್ರೀರಾಮ್’ ಅನ್ನು ನಿರ್ದೇಶಿಸಿದ್ದರು.  ಅಲ್ಲದೇ ನಾಗ ಬಾಬು ಅವರ ಅಂಜನಾ ಪ್ರೊಡಕ್ಷನ್ , ಕೃಷ್ಣ ವಂಸಿ ಮತ್ತು ವೈವಿಎಸ್ ಚೌದರಿ ಅವರ ಬರವಣಿಗೆಯ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ