'ಮಿ ಟೂ' ನಲ್ಲಿ ನಟಿ ಖುಷ್ಬು ರವಿಚಂದ್ರನ್ ಬಗ್ಗೆ ಹೇಳಿದ್ದೇನು ಗೊತ್ತಾ?

ಭಾನುವಾರ, 14 ಅಕ್ಟೋಬರ್ 2018 (15:26 IST)
ಬೆಂಗಳೂರು : ಬಹುಭಾಷಾ ನಟಿ ಖುಷ್ಬು ಅವರು ಸ್ಯಾಂಡಲ್ ವುಡ್ ನ ಖ್ಯಾತ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಟ್ವೀಟಿಗರೊಬ್ಬರಿಗೆ ಸರಿಯಾಗಿ ಮೈಬೇವರಿಳಿಸಿದ್ದಾರೆ.


#MeToo ಅಭಿಯಾನದಲ್ಲಿ ನಟಿಯರ ಸಾಕಷ್ಟು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಆದರೆ ಬಹುಭಾಷಾ ನಟಿ ಖುಷ್ಬು ಅವರು ಮಾತ್ರ ನನ್ನ 40 ವರ್ಷಗಳ ಸಿನಿ ಜರ್ನಿಯಲ್ಲಿ ಇಂತದ್ದೊಂದು ಘಟನೆ ನಡೆಯಲೇ ಇಲ್ಲ ಎಂದು #MeToo ಗೆ ಪ್ರತಿಕ್ರಿಯಿಸಿದ್ದಾರೆ.


ಆದರೆ ಈ ಟ್ವೀಟ್ ಪ್ರತಿಕ್ರಿಯಿಸದ ಟ್ವೀಟಿಗರೊಬ್ಬರು “ನೀವು ಸುಳ್ಳು ಹೇಳುತ್ತಿದ್ದೀರಾ ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರು ಎಂದು ನಾನು ಊಹಿಸಬಲ್ಲೆ” ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಇದರಿಂದ ಕೋಪಗೊಂಡ ನಟಿ ಖುಷ್ಬು ಅವರು ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೇ ಪಬ್ಲಿಸಿಟಿಗಾಗಿ ಏನೇನೊ ಮಾತಾಡಬೇಡಿ. ನೀವು ಸಂತ್ರಸ್ತೆ ಅಲ್ಲ, ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲದೇ ಈ ರೀತಿ ಮಾತಾಡುವು ತಪ್ಪು. ರವಿಚಂದ್ರನ್ ಎಂತಹವರು ಅಂತ ನನಗೆ ಗೊತ್ತು. ಇಂದು ನಮ್ಮ ತಾಯಿ ಬದುಕಿದರೆ ಅದಕ್ಕೆ ಅವರೇ ಕಾರಣ. ರವಿಚಂದ್ರನ್, ಅವರ ತಂದೆ ಎನ್. ವೀರಾಸ್ವಾಮಿ ಬಗ್ಗೆ ನಿನಗೆ ಗೊತ್ತಾ? ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ದರು. ಅಂತಹವರ ಕುರಿತು ಬಾಯಿಗೆ ಬಂದಂತೆ ಮಾತಾಡಬೇಡ” ಎಂದು ಗರಂ ಆಗಿ ಹೇಳಿದ್ದಾರೆ.


ನಟಿ ಖುಷ್ಬು ಅವರು ರವಿಚಂದ್ರನ್ ಅವರ ಜೊತೆ ಅಂಜದ ಗಂಡು, ಯುಗಪುರುಷ, ರಣಧೀರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ