ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರ ಕ್ರಿಯೆ: ಸಾರ್ವಜನಿಕರಿಗೆ ಭೋಜನ ನೀಡಲಿರುವ ಕುಟುಂಬಸ್ಥರು

ಭಾನುವಾರ, 13 ಆಗಸ್ಟ್ 2023 (17:14 IST)
ಬೆಂಗಳೂರು: ಕಳೆದ ಭಾನುವಾರ ನಿಧನರಾದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರಕ್ರಿಯಾದಿಗಳನ್ನು ಕುಟುಂಬಸ್ಥರು ಆಗಸ್ಟ್ 16 ರಂದು ಮಾಡಲಿದ್ದಾರೆ.

ಮಲ್ಲೇಶ್ವರದ ಸ್ಪಂದನಾ ತವರು ಮನೆಯಲ್ಲಿ ಶಾಂತಿ ಹೋಮ ನಡೆಯಲಿದೆ. ಅದಾದ ಬಳಿಕ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ ಸಾರ್ವಜನಿಕರಿಗೆ ಭೋಜನ ಹಮ್ಮಿಕೊಳ್ಳಲಾಗಿದೆ.

ಇದಕ್ಕಾಗಿ ಸ್ಪಂದನಾ ತಂದೆ ಬಿ.ಕೆ. ಶಿವರಾಂ ಮತ್ತು ಕುಟುಂಬಸ್ಥರು ಸಾರ್ವಜನಿಕರಿಗೆ ಭೋಜನದಲ್ಲಿ ಪಾಲ್ಗೊಳ್ಳಲು ಬಹಿರಂಗ ಆಹ್ವಾನ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಭೋಜನ ವ್ಯವಸ್ಥೆಯಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ