ಇಂದಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ನೋಡಲು ಬರಲಿದೆ ಸಿನಿ ಸ್ನೇಹಿತರ ದಂಡು

Krishnaveni K

ಬುಧವಾರ, 18 ಸೆಪ್ಟಂಬರ್ 2024 (08:45 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ನೋಡಲು ಇಂದಿನಿಂದ ಮತ್ತೆ ಸಿನಿ ಸ್ನೇಹಿತರ ದಂಡು ಆಗಮಿಸುವ ಸಾಧ್ಯತೆಯಿದೆ. ಇದಕ್ಕೆ ಕಾರಣವೂ ಇದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರನ್ನು ನೋಡಲು ನಿತ್ಯ ಸಿನಿ ಸ್ನೇಹಿತರು ಬರುತ್ತಲೇ ಇದ್ದರು. ಆದರೆ ಅಲ್ಲಿ ರಾಜಾತಿಥ್ಯ ಪಡೆದ ಫೋಟೋ ವೈರಲ್ ಆದ ಬೆನ್ನಲ್ಲೇ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಇಲ್ಲಿ ದರ್ಶನ್ ಗೆ ಕಠಿಣ ನಿಯಮಗಳನ್ನು ಹೇರಲಾಯಿತು.

ಅದರಂತೆ ಕೇವಲ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಯಿತು. ಸ್ನೇಹಿತರು, ಹಿತೈಷಿಗಳಿಗೆ ಭೇಟಿಗೆ ಅವಕಾಶವಿಲ್ಲ ಎಂದು ಡಿಐಜಿ ಖಡಕ್ ಸೂಚನೆ ಕೊಟ್ಟರು. ಅದರಂತೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಬಿಟ್ಟರೆ ಉಳಿದವರು ಯಾರೂ ಇದುವರೆಗೆ ದರ್ಶನ್ ಭೇಟಿಗೆ ಬಂದಿರಲಿಲ್ಲ.

ಆದರೆ ನಿನ್ನೆ ನ್ಯಾಯಾಧೀಶರ ಮುಂದೆ ಹಾಜರಾದಾಗ ದರ್ಶನ್ ಪರ ವಕೀಲರು ಸ್ನೇಹಿತರ ಭೇಟಿಗೆ ಅವಕಾಶ ಕೇಳಿದರು. ಅದಕ್ಕೆ ನ್ಯಾಯಾಧೀಶರೂ ಒಪ್ಪಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ನಟ ಧನ್ವೀರ್ ಜೈಲಿಗೆ ಬಂದಿದ್ದರು. ಇಂದಿನಿಂದ ಮತ್ತೆ ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರು ಜೈಲಿಗೆ ನಿಯಮಿತವಾಗಿ ಭೇಟಿ ನೀಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ